Friday, January 2, 2009

ಎಬೆನ್ ಮೊಗ್ಲೆನ್ ಭಾಷಣದ ಆಯ್ದ ತುಣುಕುಗಳು:


ಮೊದಲಿಗೆ ಫ್ರೀ ಸಾಫ್ಟ್ವೇರ್ ಎಂದರೆ ಏನೆಂದು ಶುರು ಮಾಡೋಣ. ಫ್ರೀ ಸಾಫ್ಟ್ವೇರ್ ಎಂದರೆ, ನಕಲು ಮಾಡುವ, ಮೂಲ ತಂತ್ರಾಂಶದೊಂದಿಗೆ ವಿತರಿಸುವ, ಮಾರ್ಪಡಿಸುವ ಮತ್ತು ಹೊಸ ಕ್ಷೇತ್ರಕ್ಕೆ ಅನ್ವಯಿಸುವ ಎಲ್ಲ ಸ್ವಾತಂತ್ರ್ಯಗಳನ್ನು ಅದು ಬಳಕೆದಾರರಿಗೆ ನೀಡುತ್ತದೆ. ಆದರೆ, ಮಾಲೀಕತ್ವದ ಸಾಫ್ಟ್ ವೇರ್ ಮೂಲ ತಂತ್ರಾಂಶವನ್ನು (Proprietary software) ಬಳಕೆದಾರರಿಗೆ ನಿರಾಕರಿಸುವ ಮೂಲಕ ಎಲ್ಲ ಸ್ವಾತಂತ್ರ್ಯಗಳನ್ನು ಹತ್ತಿಕ್ಕುತ್ತವೆ.
ಒಂದೇ ಒಂದು ಮಾರ್ಗ ಮುಖಿ ಯಾಗಿದ್ದ ಸಾಂಪ್ರದಾಯಿಕ ಮಾಧ್ಯಮ ದ ಪ್ರಾಮುಖ್ಯತೆಯನ್ನು ಸ್ವತಂತ್ರ ತಂತ್ರಾಂಶ ಮತ್ತು ಒಡಮೂಡುತ್ತಿರುವ ಹೊಸ ಮಾಧ್ಯಮಗಳು ಕಿರಿದುಗೊಳಿಸುತ್ತಿವೆ. ಜನರು ಒಂದಾಗಿ ಜ್ಞಾನವನ್ನು ಹಂಚಿಕೊಳಲು ವಿಕಿಪೀಡಿಯಾಗಳು ಅನುವುಮಾಡಿಕೊಡುತ್ತಿವೆ ಹಾಗೂ ಸಮುದಾಯಗಳ ನಡುವಿನ ಸಂವಹನ ಅಡೆತಡೆಗಳನ್ನು ನಿವಾರಿಸಿ ಚರ್ಚೆ ಮತ್ತು ನೇರ ಸಂವಹನವನ್ನು ಸುಲಭ ಸಾಧ್ಯವಾಗಿಸಿವೆ. ಇಂದು ವಿಕಿಪೀಡಿಯಾ ಗಳು ವಿದ್ಯಾರ್ಥಿಗಳಿಗೆ ಜ್ಞಾನದ ಆಕರಗಳಾಗಿ ಮಾರ್ಪಟ್ಟಿದ್ದು ವಿದ್ಯಾರ್ಥಿಗಳು ಮತ್ತು ಬೋಧಕರ ನಡುವಿನ ಕಲಿ - ಕಲಿಸುವಿಕೆಯನ್ನು ಹೆಚ್ಚಿಸುತ್ತಿದೆ. ಇದರಿಂದಾಗಿ ಇದು ಸಾಂಪ್ರದಾಯಿಕ ಪರೀಕ್ಷಾ ವ್ಯವಸ್ಥೆಗೆ ಪರ್ಯಾಯವಾಗಿ ಮೂಡಿಬರುತ್ತಿದೆ. ಇದಕ್ಕೊಂದು ಜ್ವಲಂತ ಉದಾಹರಣೆಯೆಂದರೆ; ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ತಾವಿದ್ದಲ್ಲಿಂದಲೇ ಯೂರೋಪಿನ ಸಂಶೋಧಕರು ಜೊತೆಗೂಡಿ ಸಂಶೋಧನೆ ನಡೆಸಲು ವಿಕಿಪೀಡಿಯಾ ಸಹಾಯ ಮಾಡಿತು.
ಸಾಂಪ್ರದಾಯಿಕ ಮಾಧ್ಯಮ ಮಾದರಿಯಲ್ಲಿ ಲೇಖನವನ್ನು ತಿದ್ದುಪಡಿ ಮಾಡಲು ಸಂಪಾದಕರಿಗೆ ಅತಿಸ್ವಾತಂತ್ರ್ಯವಿದೆ. ಆದರೆ ವಿಕಿಪೀಡಿಯಾ ಮಾದರಿಯಲ್ಲಿ ಲೇಖನ ವನ್ನು ಜನರೇ ಬರೆದು ಜ್ಞಾನವನ್ನು ಹಂಚಿಕೊಳ್ಳುವುದರಿಂದ ಅದನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ, ವಿಕಿಪೀಡಿಯಾ ಮಾದರಿಯಲ್ಲಿ, ಲೇಖನಗಳ ನಿಖರತೆಯನ್ನು ಅಳೆಯಲು ಜನತೆಯು ಸದಾ ಕಾವಲುನಾಯಿಯಂತೆ ಸಾಮೂಹಿಕವಾಗಿ ಕೆಲಸ ಮಾಡುತ್ತವೆ. ಹಾಗೆಯೇ ಬ್ಲಾಗ್ ಗಳು ಬಳಕೆದಾರರಿಗೆ ಒಂದು ಸುಲಭಸಾಧ್ಯ ವೇದಿಕೆ ಒದಗಿಸುತ್ತವೆ ಮತ್ತು ಅನಿಸಿಕೆ ವ್ಯಕ್ತಪಡಿಸಲು ಪೂರ್ಣ ಸ್ವಾತಂತ್ರ್ಯ ನೀಡುತ್ತವೆ. ವಿಶಾಲ ಓದು ಮತ್ತು ಸಂಶೋಧನೆಗಳ ಮೂಲಕ ಬ್ಲಾಗರುಗಳು ತಮ್ಮ ಬ್ಲಾಗುಗಳ ಮೂಲಕ ಜ್ಞಾನವನ್ನು ವ್ಯಕ್ತಪಡಿಸಿ ಹಂಚಿಕೊಳ್ಳುವುದರಿಂದ ಸಮಾಜವು ಮಹತ್ತರ ರೀತಿಯಲ್ಲಿ ಲಾಭಪಡೆಯುತ್ತದೆ.
ಡಬ್ಲ್ಯೂ ೩ ಒಕ್ಕೂಟ ಎಂಬ ಸಮೂಹವು ಆಡಿಯೋ ಮತ್ತು ವೀಡಿಯೋ ಕಡತಗಳನ್ನು ಹೆಚ್ ಟಿ ಎಮ್ ಎಲ್ ೫.೦ ರಲ್ಲಿ ಅಳವಡಿಸಲು ಕೆಲಸ ಮಾಡುತ್ತಿದ್ದು ಇದರಿಂದ ಯಾವುದೇ ಪ್ಲಗ್ ಇನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳದೆ ಅವುಗಳನ್ನು ಬ್ರೌಸರ್ ಗಳಲ್ಲಿ ಬಳಸಬಹುದು. ಹಾಗೆಯೇ ಹೆಚ್ ಟಿ ಎಮ್ ಎಲ್ ನಲ್ಲಿ ಮಲ್ಟಿಮೀಡಿಯಾ ಫೈಲ್ ಗಳನ್ನು ಬಳಸಬಹುದು. ಆದರೆ, ಇಂಥಹದಕ್ಕೆ ಪ್ರಧಾನವಾಗಿ ತಡೆಗೋಡೆ ಎಂದರೆ ಬಳಕೆ ಮಾಡಲಾಗದಿರುವುದು ಅಥವಾ ತಂತ್ರಜ್ಞಾನ ಅಭಿವೃದ್ದಿಯಾಗದಿರುವುದು ಕಾರಣವಲ್ಲ, ಆದರೆ, ಪೇಟೆಂಟ್ ಗಳು ಮತ್ತು ಕಾಪಿರೈಟ್ ಗಳು ಹೊಸ ತಂತ್ರಜ್ಣಾನಗಳನ್ನು ಜನಸಾಮಾನ್ಯರು ಬಳಸಲು ತಡೆ ಒಡ್ದುತ್ತಿರುವುದು ಕಾರಣ.
ಒಂದು ಪ್ರಧಾನ ಅಡೆತಡೆಯೆಂದರೆ ಮಲ್ಟಿಮೀಡಿಯಾ ಕೊಡೆಕ್ ಗಳನ್ನು ಮಾಲೀಕತ್ವ ಆಧಾರದ ಮೇಲೆ ಬಳಸುತ್ತಿರುವುದಾಗಿದೆ. ಕೊಡೆಕ್ ಗಳು ಸ್ವತಂತ್ರವಾಗಿ ಲಭ್ಯವಾಗುವಂತಾದಲ್ಲಿ ವೆಬ್ ಮೂಲಕ ವೀಡಿಯೋ ಪ್ರಸಾರವಾಗುವ ವಿಧಾನವೇ ಕ್ರಾಂತಿಕಾರಕವಾಗಿ ಬದಲಾಗುವುದು. ಆಗ ನಮಗೆ ದೂರದರ್ಶನಗಳೇ ಬೇಕಿರುವುದಿಲ್ಲ. ಏಕೆಂದರೆ, ಯಾವುದೇ ಪ್ಲಗ್ ಇನ್ ಗಳಿಲ್ಲದೆ ಎಲ್ಲರೂ ಮಲ್ಟಿಮೀಡಿಯಾ ಮೂಲಕ ತಮ್ಮದನ್ನು ಪ್ರಕಟಿಸಿಕೊಳ್ಳುತ್ತಾರೆ ಮತ್ತು ಕೇಳುತ್ತಾರೆ. ಸ್ವತಂತ್ರ ತಂತ್ರಾಂಶ ಮತ್ತು ಹೊಸ ಮಾಧ್ಯಮವು ಕೇವಲ ನೋಡುಗರಾಗಿದ್ದ ಅಥವಾ ಬಳಕೆದಾರರಾಗಿದ್ದ ಪ್ರತಿಯೊಬ್ಬರನ್ನು ಡ್ರೈವರ್ ಜಾಗದಲ್ಲಿ ಕೂರಿಸುತ್ತದೆ.
ಲಾಭ ಗಳಿಸುವುದು ಮಾತ್ರವೇ ಮಾನವನ ಸಹಜ ಗುಣವಲ್ಲ, ಮಾನವ ಸಮುದಾಯವು ಒಂದು ಸಮಾಜವಾಗಿ ಮೂಡಿಬರಲು ಹಂಚಿಕೊಳ್ಳುವುದು ಮತ್ತು ಸಹಕರಿಸುವುದು ಕೂಡ ಅವನ ಗುಣಗಳಾಗಿವೆ. ಸಹಾಯ ಮಾಡುವ ಗುಣವು ಮಾನವನ ಮೂಲಗುಣಗಲ್ಲೊಂದು. ದೈನಂದಿನ ಜೀವನದ ಪ್ರತಿದಿನ, ಯಾವುದೇ ನಿರೀಕ್ಷೆಯಿಲ್ಲದೆ ನಾವು ಯಾರಿಗಾದರೂ ನೆರವು ನೀಡುತ್ತಿದ್ದೇವೆ. ಸ್ವತಂತ್ರ ತಂತ್ರಾಂಶವು ಉತ್ತಮ ಸಮಾಜ ನಿರ್ಮಾಣಕ್ಕಾಗಿ ನಮಗೆ ಸಹಕಾರಿಯಾಗುತ್ತ್ತದೆ.
ಸ್ವತಂತ್ರ ತಂತ್ರಾಂಶದ ಶಕ್ತಿ: ಭಾರತದಂಥಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ತಲಾದಾಯವು ಅತಿ ಕಮ್ಮಿ ಇದೆ. ಆಪರೇಟಿಂಗ್ ಸಿಸ್ಟಮ್ ಮತ್ತು ಬಳಕೆ ಮಾಡಬೇಕಾದ ಸಾಫ್ಟ್ ವೇರ್ ಗಳಿಗೆ ಅಷ್ಟು ವೆಚ್ಚ ತಗುಲಿದರೆ, ಭಾರತದ ಬಹುಸಂಖ್ಯಾತ ಜನರಿಗೆ ಈ ತಂತ್ರಜ್ಞಾನವನ್ನು ಪಡೆದುಕೊಳ್ಳಲು ಅಸಾಧ್ಯವಾಗುವುದು. ತಲಾದಾಯವು ಸುಮಾರು 30 ಸಾವಿರ ಡಾಲರ್ ಗಳಿರುವ ಅಮೇರಿಕಾದಂಥಹ ರಾಷ್ಟ್ರಗಳಲ್ಲಿ ಅದನ್ನು ಪಡೆದುಕೊಳ್ಳಲು ಸಾಧ್ಯವಿರುವುದಷ್ಟೆ. ಆದ್ದರಿಂದ ಭಾರತಕ್ಕೆ ಬೇಕಾಗಿರುವುದು ಅತಿ ಕಡಿಮೆ ಬೆಳೆಯ ಅಥವಾ ಉಚಿತವಾಗಿ ದೊರೆಯುವ ಸಾಫ್ಟ್ವೇರ್ ಹೊರತು ಡಾಲರ್ ಗಳಲ್ಲಿರುವುದಲ್ಲ. ಗ್ನೂ/ಲಿನಕ್ಸ್ ಉಚಿತವಾಗಿ ಲಭ್ಯವಿರುವುದರಿಂದ ಆ ಅವಶ್ಯಕತೆಯನ್ನು ಪೂರೈಸುತ್ತದೆ. ಅಲ್ಲದೆ ಭಾರತದ ಜನತೆಯಲ್ಲಿ ಕೇವಲ ಶೇ. 5 ಮಂದಿ ಮಾತನಾಡುವ ಇಂಗ್ಲೀಷ್ ಭಾಷೆಯಲ್ಲಿ ಮಾತ್ರವೇ ಸಾಫ್ಟ್ ವೇರ್ ಗಳನ್ನು ಉತ್ಪಾದಿಸುತ್ತಿದ್ದು ಅದಕ್ಕೆ ಉತ್ತಮ ಪರ್ಯಾಯವೆಂದರೆ ಗ್ನೂ/ಲಿನಕ್ಸ್ ನಿಂದ ಪ್ರಾದೇಶಿಕ ಭಾಷೆಯಲ್ಲಿ ಸಾಫ್ಟ್ ವೇರ್ ಗಳನ್ನು ಉತ್ಪಾದಿಸುವುದು ಮಾತ್ರ.

Thursday, January 1, 2009

ಪರಿಸರವನ್ನು ಹಾಳುಗೆಡಹುತ್ತಿರುವ ಡಿಸ್ಟಿಲರಿ ಕೈಗಾರಿಕೆಗಳ ತ್ಯಾಜ್ಯ ನೀರು ಮತ್ತು ಅದರ ಬಯೋ-ಕಾಂಪೋಸ್ಟಿಂಗ್ ಎಂಬ ಹೆಮ್ಮಾರಿ






ಚಿತ್ರ: ಬೋರ್ವೆಲ್ ನಿಂದ ಹೊರಬರುತ್ತಿರುವ ಕೆಂಪು ಕಲುಷಿತ ನೀರು.



ನಿಸರ್ಗ ಪ್ರತಿಯೊಬ್ಬ ಮನುಷ್ಯನ ಅವಶ್ಯಕತೆಗಳನ್ನು ಪೂರೈಸುತ್ತದೆಯೇ ಹೊರತು ಪ್ರತಿಯೊಬ್ಬನ ದುರಾಸೆಯನ್ನಲ್ಲ.


- ಮಹಾತ್ಮ ಗಾಂಧಿ.


ಜಾಗತೀಕರಣದ ಇಂದಿನ ಯುಗದಲ್ಲಿ ಒಂದೆಡೆ 'ಆರ್ಥಿಕಾಭಿವೃದ್ಧಿ' ಹಾಗೂ ವಿಪುಲ ಉದ್ಯೋಗವಕಾಶ'ಗಳ ಹೊದಿಕೆ ಹೊದ್ದಿರುವ ಅತ್ಯಂತ ಹೆಚ್ಚು ಮಲಿನಕಾರಕ ಕಾಖರ್ಾನೆಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ಸ್ಥಾಪಿಸಲಾಗುತ್ತಿದೆ. ಮತ್ತೊಂದೆಡೆ ಎಲ್ಲ ಕೈಗಾರಿಕೆಗಳು ಸಹ ಮಾಲಿನ್ಯವುಂಟು ಮಾಡುವುದರಿಂದ ಯಾವುದೇ ಕೈಗಾರಿಕೆ ಸ್ಥಾಪನೆಗೂ ಅವಕಾಶ ಕೂಡದು ಎಂದು ಅಭಿವೃದ್ಧಿ-ವಿರೋಧಿ ನಿಲುವು ತಳೆಯುತ್ತಿರುವ ಪರಿಸರವಾದಿಗಳ ಕೂಗು. ಈವೆರಡೂ ಸಂಘರ್ಷದ ನಡುವೆ ಪರಿಸರ ಸಂರಕ್ಷಣೆಯ ನೈಜ ಕೂಗು ಯಾರ ಕಿವಿಯ ಮೇಲೂ ಬೀಳದೆ, ಅಭಿವೃದ್ಧಿಯೆಂಬ ಭ್ರಮಾ ಲೋಕದ ಭಯಾನಕ ಹಡಗನ್ನೇರಿ ಕೇಂದ್ರ ಮತ್ತು ರಾಜ್ಯ ಸಕರ್ಾರಗಳೆರಡೂ ನೆಲ, ಜಲ, ಅರಣ್ಯ ಸಂಪತ್ತು ಮತ್ತು ನೈಸಗರ್ಿಕ ಸಂಪನ್ಮೂಲಗಳನ್ನು ಬಂಡವಾಳಿಗರು ಕೊಳ್ಳೆಹೊಡೆದು ಬರಿದು ಮಾಡುವಂಥಹ ನೀತಿಗಳನ್ನು ಅನುಸರಿಸುತ್ತಲಿವೆ. ಭಾರತದಲ್ಲಿ ಸುಮಾರು 350 ಕ್ಕೂ ಹೆಚ್ಚು ಡಿಸ್ಟಿಲರಿ ಕೈಗಾರಿಕೆಗಳಿದ್ದು ಕನರ್ಾಟಕ ರಾಜ್ಯದಲ್ಲೇ 40ಕ್ಕೂ ಅಧಿಕ ಡಿಸ್ಟಿಲರಿ ಕೈಗಾರಿಕೆಗಳಿವೆ. ಡಿಸ್ಟಿಲರಿ ಕೈಗಾರಿಕೆಗಳಿಗೆ ಕಚ್ಛಾ ವಸ್ತುವೆಂದರೆ ಸಕ್ಕರೆ ಕಾಖರ್ಾನೆಗಳಿಂದ ಉಪಉತ್ಪನ್ನವಾಗುವ ಮೊಲಾಸಸ್ ಎಂಬ ಮಡ್ಡಿ. ಅದನ್ನು ಬಳಸಿಕೊಂಡು ಎಥೆನಾಲ್ (ಮಧ್ಯಸಾರ)ನ್ನು ತಯಾರಿಸುವ ಡಿಸ್ಟಿಲರಿ ಕೈಗಾರಿಕೆಗಳಿಂದ ಪ್ರತಿ ಲೀಟರ್ ಎಥೆನಾಲ್ ಉತ್ಪನ್ನ ತಯಾರಿಕೆಯಲ್ಲಿ 15 ಲೀಟರ್ ಕಲುಷಿತ ತ್ಯಾಜ್ಯ ನೀರು ಬಿಡುಗಡೆಯಾಗುತ್ತದೆ. ಇದು ಅತಿ ಹೆಚ್ಚು ಮಲಿನಕಾರಕ ಅಂಶಗಳನ್ನು ಹೊಂದಿದ್ದು ಇದನ್ನು ಸಂಸ್ಕರಿಸದೆ ಹಾಗೆಯೇ ಹೊರಗಿನ ಮಣ್ಣು ಅಥವಾ ಜಲಮೂಲಗಳಿಗೆ ಹಾಯಿಸಿದಲ್ಲಿ ಅಂತರ್ಜಲ ಮಾಲಿನ್ಯ, ಮಣ್ಣಿನ ಮಲಿನತೆ, ಕೃಷಿ ಬೆಳೆ ಹಾನಿ, ವಾಯು ಮಾಲಿನ್ಯ ಮುಂತಾದ ದುಷ್ಪರಿಣಾಮಗಳು ಕಟ್ಟಿಟ್ಟ ಬುತ್ತಿಯೇ ಸರಿ. ಇಂಥಹ ಕೈಗಾರಿಕಾ ಮಾಲೀಕರು ರಾಜಕೀಯವಾಗಿ ಹಾಗೂ ಆಥರ್ಿಕವಾಗಿ ಬಲಾಢ್ಯವಾಗಿರುವುದರಿಂದ ಕೇಂದ್ರ ಮತ್ತು ರಾಜ್ಯ ಮಟ್ಟದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳ ಮೇಲೂ ಪ್ರಭಾವ ಬೀರುವ ತಾಕತ್ತು ಮತ್ತು ಭಂಡಗಾರಿಕೆ ಅವುಗಳಲ್ಲಿರುವುದರಿಂದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಅನುಮೋದನೆ ಪಡೆದುಕೊಂಡು ಕಾಖರ್ಾನೆ ನಡೆಸುತ್ತಿವೆ. ನಮ್ಮ ದೇಶದಲ್ಲಿ ಸಕ್ಕರೆ ಕಾಖರ್ಾನೆಗಳು ರೈತರು ತಕ್ಕಮಟ್ಟಿಗಾದರೂ ಒಂದಷ್ಟು ಕಾಸು ನೋಡುವ ಭಾಗ್ಯವೊದಗಿಸಿದ್ದವು. ಆದರೆ ಜಾಗತೀಕರಣದ ಮಾರುಕಟ್ಟೆ ಪೈಪೋಟಿಯಿಂದಾಗಿ ಒಂದೆಡೆ ಸಕ್ಕರೆ ಕಾಖರ್ಾನೆಗಳು ಕಡಿಮೆ ಬೆಲೆಯ ಸಕ್ಕರೆ ಆಮದಿನಿಂದ ಸ್ಪಧರ್ೆ ಎದುರಿಸಲಾಗದೆ ಮುಚ್ಚಿ ಹೋಗುತ್ತಾ ರೈತರನ್ನು ಸಹ ತಮ್ಮೊಡನೆ ಪಾತಾಳಕ್ಕೆ ಎಳೆದೊಯ್ಯತೊಡಗಿದವು. ರಾಜ್ಯದ ಬಹುತೇಕ ಸಹಕಾರಿ ಸಕ್ಕರೆ ಕಾಖರ್ಾನೆಗಳು ಆಳುವ ವರ್ಗದ ದುರಾಡಳಿತದಿಂದಾಗಿ ನಶಿಸತೊಡಗಿದ್ದರೆ, ಖಾಸಗಿ ಸಕ್ಕರೆ ಕಾಖರ್ಾನೆಗಳು ಉನ್ನತ ತಂತ್ರಜ್ಞಾನ ಅಳವಡಿಕೆ, ಸಕ್ಕರೆ ಉತ್ಪನ್ನದೊಡನೆ ಎಥೆನಾಲ್ & ವಿದ್ಯುತ್ ಉತ್ಪಾದನೆ, ಮುಂತಾದ ಕ್ರಮಗಳಿಂದ ಯಶಸ್ವಿಯಾಗಿ ಮುನ್ನಡೆಯತೊಡಗಿದ್ದರೂ ರೈತರ ಸ್ಥಿತಿ ಮಾತ್ರ: 'ಎದುದ್ದ ಸಾಲ, ಮಂಡಿಯುದ್ದ ಕಬ್ಬು'.

ಅಪಾಯಕಾರಿ ತ್ಯಾಜ್ಯ ನೀರು:


ಡಿಸ್ಟಿಲರಿ ಕಾಖರ್ಾನೆಯಿಂದ ವಿಸಜರ್ಿಸಲಾಗುವ ಸ್ಪೆಂಟ್ ವಾಷ್ (ಕಲುಷಿತ ತ್ಯಾಜ್ಯ ನೀರು) ನ್ನು ಸಂಸ್ಕರಿಸಿ ಹಲವು ತಿಂಗಳುಗಳ ಕಾಲ ಕಾಂಪೊಸ್ಟಿಂಗ್ ಘಟಕದ ದೊಡ್ಡ ದೊಡ್ಡ ಗುಂಡಿಗಳಲ್ಲಿ ತಂಗಿಸಿ, ಅದನ್ನು ಸಕ್ಕರೆ ಕಾಖರ್ಾನೆಯ ಪ್ರೆಸ್ ಮಡ್ನೊಂದಿಗೆ ಮಿಶ್ರಣ ಮಾಡಿ ಗೊಬ್ಬರ ತಯಾರಿಸಲಾಗುತ್ತದೆ. ಈ ಸ್ಪೆಂಟ್ ವಾಷ್ ಕಲುಷಿತ ನೀರು ಕಂದು ಬಣ್ಣದ್ದಾಗಿದ್ದು, ಹೆಚ್ಚಿನ ತಾಪ, ಕಡಿಮೆ ಪಿ.ಹೆಚ್, ಕರಗಿರುವ ರಾಸಾಯನಿಕ ಮತ್ತು ರಾಸಾಯನಿಕೇತರ ಅಂಶಗಳಿಂದ ಕೂಡಿರುತ್ತದೆ. ಇದರಲ್ಲಿ ಕಬ್ಬಿಣ, ಮ್ಯಾಂಗನೀಸ್, ಜಿಂಕ್, ಕ್ರೋಮಿಯಂ, ಕ್ಯಾಡ್ಮಿಯಂ, ಇನ್ನಿತರ ಲೋಹಾಂಶಗಳು ಸಹ ಇರುತ್ತವೆ. ಇದರಲ್ಲಿ ಬಿಒಡಿ(ಬಯಲಾಜಿಕಲ್ ಆಕ್ಸಿಜನ್ ಡಿಮ್ಯಾಂಡ್) ಮತ್ತು ಸಿಒಡಿ (ಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್) ಪ್ರಮಾಣವು ಕ್ರಮವಾಗಿ ಪ್ರತಿ ಲೀಟರ್ನಲ್ಲಿ 50,000 ಮಿ.ಗ್ರಾಂ ಮತ್ತು 1.0 ಲಕ್ಷ ಮಿ.ಗ್ರಾಂ ಇದ್ದು, ಇವು ಅಂತರ್ಜಲ ತಲುಪಿ ಅಂತರ್ಜಲವನ್ನೇ ಮಲಿನಗೊಳಿಸಿ ನಿರುಪಯುಕ್ತಗೊಳಿಸುವುದಲ್ಲದೆ, ಈ ಕಲುಷಿತ ನೀರನ್ನು ತಂಗಿಸುವ ವಿಸ್ತಾರವಾದ ಗುಂಡಿಗಳಿಂದ ಬರುವ ಗಬ್ಬು ವಾಸನೆ ಮನುಷ್ಯನ ಆರೋಗ್ಯ ಮತ್ತು ಸುತ್ತಲಿನ ಜೀವಿ ಪರಿಸರಕ್ಕೆ ಹಾನಿಯುಂಟು ಮಾಡುತ್ತದೆ ಹಾಗೂ ಕೃಷಿ ಬೆಳೆಗಳಿಗೂ ಮಾರಕವಾಗುತ್ತದೆ.

ರಾಜ್ಯದಲ್ಲಿ ಯಾವುದೇ ಡಿಸ್ಟಿಲರಿ ಕೈಗಾರಿಕೆಗಳಿಗೆ ಭೇಟಿ ನೀಡಿದರೂ ಅಲ್ಲೆಲ್ಲ ಕಂಡುಬರುವುದೇನೆಂದರೆ ಕೇಂದ್ರೀಯ ಜಲಮಾಲಿನ್ಯ ನಿಯಂತ್ರಣ ಕಾಯಿದೆ ಮತ್ತು ವಾಯುಮಾಲಿನ್ಯ ನಿಯಂತ್ರಣ ಕಾಯಿದೆಗಳನ್ನು ನೇರವಾಗಿ ಉಲ್ಲಂಘಿಸಿರುವುದು ಗೋಚರವಾಗುತ್ತದೆ.

ಸಾರ್ವಜನಿಕ ಸಭೆಗಳು = ರಹಸ್ಯ ಸಭೆಗಳು!:
ಇಂಥಹದೊಂದು ಕೈಗಾರಿಕಾ ಘಟಕ ಸ್ಥಾಪನೆಯಾಗುವ ಮುನ್ನ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಿ ಜನಾಭಿಪ್ರಾಯ ಸಂಗ್ರಹಣೆ ಮಾಡಲು ಸಾರ್ವಜನಿಕ ಪರಿಸರ ಸಭೆಗಳನ್ನು ನಡೆಸಬೇಕೆಂಬ ನಿಯಮಾವಳಿಯಿದೆ. ಆದರೆ ಹಲವು ಕೈಗಾರಿಕಾ ಘಟಕಗಳು ಸ್ಥಳೀಯವಾಗಿ ಇಂಥಹ ಸಾರ್ವಜನಿಕ ಸಭೆಗಳನ್ನು ನಡೆಸದೇ ರಹಸ್ಯವಾಗಿಯೇನೋ ಎಂಬಂತೆ ನಡೆಸಿಕೊಳ್ಳುತ್ತವೆ ಇಲ್ಲದಿದ್ದಲ್ಲಿ ತಮ್ಮದೇ ಪುಂಡು ಜನರ ಗುಂಪೊಂದನ್ನು ಕರೆತಂದು ಸಾರ್ವಜನಿಕ ಅಭಿಪ್ರಾಯ ರೂಪುಗೊಳ್ಳಲು ಅವಕಾಶ ನೀಡದೆ, ಯೋಜನೆಯ ವಿರುದ್ದ ಅಭಿಪ್ರಾಯ ವ್ಯಕ್ತಪಡಿಸುವವರ ಮೇಲೆ ದಾಂದಲೆ ನಡೆಸುವ ಪರಿಪಾಟವೂ ಕೈಗಾರಿಕೆಗಳಿಗೆ ಚೆನ್ನಾಗಿ ಕರಗತವಾಗಿದೆ.

ಜೆಮಿನಿ ಡಿಸ್ಟಿಲರಿ ಕೈಗಾರಿಕೆಯ ಪರಿಸರ-ಹಾನಿ ಕೃತ್ಯಗಳು:

ಉದಾಹರಣೆಯಾಗಿ ನಂಜನಗೂಡಿನ ಜೆಮಿನಿ ಡಿಸ್ಟಿಲರಿ ಕೈಗಾರಿಕೆಯನ್ನು ಅವಲೋಕಿಸಿದಾಗ ಅದರಿಂದುಂಟಾಗಿರುವ ಹಾನಿಯಂತೂ ಎಂಥಹವರನ್ನು ಬೆಚ್ಚಿಬೀಳಿಸಬಲ್ಲದು. ದಿನವೊಂದಕ್ಕೆ ಸುಮಾರು 4.20 ಲಕ್ಷ ಲೀಟರ್ ಸ್ಪೆಂಟ್ ವಾಷ್ ಕಲುಷಿತ ನೀರನ್ನು ಉತ್ಪತ್ತಿ ಮಾಡುತ್ತಿರುವ ಈ ಕೈಗಾರಿಕೆಯು ಸುತ್ತಲಿನ ಪ್ರದೇಶದ ಅಂತರ್ಜಲವನ್ನು ಮಲಿನಗೊಳಿಸಿ, ಕೃಷಿಯೋಗ್ಯ ಭೂಮಿಯ ಫಲವತ್ತತೆಯನ್ನು ಹಾಳುಗೆಡವಿ ಸ್ಥಳೀಯ ರೈತರ ಒತ್ತಡದ ನಡುವೆ ಮತ್ತು ಕನರ್ಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗಳು ರದ್ದುಗೊಳಿಸಿರುವ ಪರವಾನಗಿಯಿಂದ ಹೈಕೋಟರ್್ನಿಂದ ತಡೆಯಾಜ್ಞೆ ತಂದು ಕಾಖರ್ಾನೆಯನ್ನು ನಡೆಸುತ್ತಲಿದೆ.



ಚಿತ್ರ: ಡಿಸ್ಟಿಲರಿ ಕೈಗಾರಿಕೆಯ ಬಳಿಯಿರುವ ಗೀಕಳ್ಳಿ ಗ್ರಾಮದ ಬಾವಿಯ ನೀರು




ಪ್ರಂಟ್ಲೈನ್ ಪತ್ರಿಕೆಯು ದಾಖಲಿಸಿರುವಂತೆ, ಆ ಕಾಖರ್ಾನೆಯ ಸುತ್ತಲಿನ ಸುಮಾರು 270 ಎಕರೆ ಪ್ರದೇಶದ ಅಂತರ್ಜಲ ಮಲಿನಗೊಂಡು 20,000 ಜನರಿರುವ ಆ ಪ್ರದೇಶದ ಬೋರ್ವೆಲ್ಗಳಲ್ಲಿ ಕಂದು ಮಿಶ್ರಿತ ಕೆಂಪು ನೀರು ಬರುತ್ತಿದ್ದು ಕುಡಿಯಲು ಬಾರದಂತಾಗಿದೆ ಮತ್ತು ಕೃಷಿಗೂ ಯೋಗ್ಯವಲ್ಲದಾಗಿದೆ. ಈ ಪ್ರದೇಶವು ನೀರಾವರಿಯದ್ದಾಗಿರುವುದರಿಂದ ಕಲುಷಿತ ನೀರು ಬಲು ಸುಲಭವಾಗಿ ಮಣ್ಣಿನ ಮೂಲಕ ಅಂತರ್ಜಲ ಸೇರುತ್ತದೆ. ಈ ಕಾಖರ್ಾನೆ ಸ್ಥಾಪನೆಯಾದ ನಂತರದಲ್ಲಿ ಕಬ್ಬು ಮತ್ತು ಭತ್ತದ ಬೆಳೆಗಳ ಇಳುವರಿ ಮೊದಲಿಗಿಂತ ಬರೇ ಅರ್ಧದಷ್ಟು ಇಳುವರಿ ಸಿಗುತ್ತಿದೆ. ಗೀಕಳ್ಳಿ, ಗೀಕಳ್ಳಿ ಹುಂಡಿ, ಗೋಳೂರು, ಕೋಡಿ ನರಸಾಪುರ, ಮುಳ್ಳೂರು, ವಿದ್ಯಾಪೀಠ, ಬೆಂಡಗಳ್ಳಿ ಮತ್ತು ಚಿನ್ನಗುಂಡಿಹಳ್ಳಿ ಗ್ರಾಮಗಳು ಅತೀವ ತೊಂದರೆಯಲ್ಲಿರುವ ಗ್ರಾಮಗಳಾಗಿವೆ. ಗ್ರಾಮಸ್ಥರ ಒತ್ತಡದಿಂದಾಗಿ ಈ ಪ್ರದೇಶಗಳಿಗೆ ಕಾಖರ್ಾನೆಯೇ ಕುಡಿಯುವ ನೀರನ್ನು ಸದ್ಯಕ್ಕೆ ಸರಬರಾಜು ಮಾಡುತ್ತಿದೆ. ಈ ಪ್ರದೇಶದ ಜಾನುವಾರುಗಳನ್ನು ಚಿಕಿತ್ಸೆಗಾಗಿ ಕರೆತರಬಾರದೆಂದು ಸ್ಥಳೀಯ ಪಶುಸಂಗೋಪನಾ ವೈದ್ಯರು ಜನರಿಗೆ ಹೇಳುತ್ತಾರಂತೆ. ಡಿಸ್ಟಿಲರಿ ಕಲುಷಿತ ತ್ಯಾಜ್ಯ ನೀರು ವ್ಯವಸಾಯಕ್ಕೆ ಬಹಳ ಯೋಗ್ಯವೆಂದು ರೈತರನ್ನು ನಂಬಿಸಿ ಹಲವು ಪ್ರದೇಶಗಳಲ್ಲಿ ಬೆಳೆ ನಾಶಗೊಂಡಿದೆ. ಈ ಕೈಗಾರಿಕೆಗಳು ರಾತ್ರಿವೇಳೆ ಘಟಕದಿಂದ ಉತ್ಪತ್ತಿಯಾಗುವ ಕಲುಷಿತ ನೀರನ್ನು ಸುತ್ತಮುತ್ತಲ ಗದ್ದೆಗಳಿಗೋ ಕೆರೆ ಕಾಲುವೆಗಳಿಗೋ ಸಂಸ್ಕರಣೆ ಮಾಡದೆ ಬಿಟ್ಟುಬಿಡುತ್ತವೆ. ಈ ಭಾಗದ ಜಮೀನಿನಲ್ಲಿ ಕೇವಲ ಶೇ. 25ರಷ್ಟು ಮಾತ್ರವೇ ಇಳುವರಿ ಬರುವುದರಿಂದ ಕೃಷಿ ಸಾಲ ನೀಡಲು ಸಾಧ್ಯವಿಲ್ಲವೆಂದು ಕೆಲವು ಬ್ಯಾಂಕುಗಳು ಸಾಲ ವಿತರಣೆಯನ್ನು ನಿರಾಕರಿಸಿವೆ.

ಚಿತ್ರ: ಸ್ಪೆಂಟ್ ವಾಷ್ (ಕಲುಷಿತ ನೀರು) ಹರಿಯುತ್ತಿರುವುದು ಮತ್ತು ತಂಗಿಸಿರುವ ತೊಟ್ಟಿಗಳು.




ಬಯೋ-ಕಾಂಪೊಸ್ಟಿಂಗ್ ಗೊಬ್ಬರ ಕಾಖರ್ಾನೆಗಳಿಂದುಂಟಾಗುತ್ತಿರುವ ದುಷ್ಪರಿಣಾಮಗಳು:


ರಾಜ್ಯದಾದ್ಯಂತ ಅದರಲ್ಲೂ ವಿಶೇಷವಾಗಿ ಚಾಮುಂಡೇಶ್ವರಿ ಷುಗರ್ಸ್ ಕಂಪನಿಯು ಮಂಡ್ಯದ ಕೆ.ಎಂ.ದೊಡ್ಡಿ ಬಳಿಯ ಅಣ್ಣೂರಿನಲ್ಲಿ ಸ್ಥಾಪಿಸಿರುವ ಡಿಸ್ಟಿಲರಿ ಘಟಕ ಮತ್ತು ಮಳವಳ್ಳಿ ತಾಲ್ಲೂಕಿನ ನೆಟ್ಟಕಲ್ ಬಳಿ ಸ್ಥಾಪಿಸಿರುವ ಕಾಂಪೊಸ್ಟಿಂಗ್ ಘಟಕ, ಗೌರಿಬಿದನೂರಿನಲ್ಲಿರುವ ಗೌರಿ ಡಿಸ್ಟಿಲರಿಯ ಕಾಂಪೊಸ್ಟಿಂಗ್ ಘಟಕ, ನಂಜನಗೂಡಿನ ಜೆಮಿನಿ ಡಿಸ್ಟಿಲರಿಯವರ ಕಾಂಪೊಸ್ಟಿಂಗ್ ಘಟಕ, ಇವೆಲ್ಲ ಜ್ವಲಂತ ಉದಾಹರಣೆಗಳು ಕೆಳಕಂಡ ಅಪಾಯಗಳನ್ನು ಸಾಬೀತು ಮಾಡಿವೆ. ಕೇಂದ್ರ ಮತ್ತು ಕನರ್ಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗಳು ಇಂತಹ ಹೆಚ್ಚು ಮಲಿನಕಾರಕ ಕೈಗಾರಿಕೆಗಳನ್ನು ಕೆಂಪು ಪಟ್ಟಿಗೆ ಸೇರಿಸಿವೆ. ಡಿಸ್ಟಿಲರಿ ಕಾಖರ್ಾನೆಯ ಕಲುಷಿತ ನೀರು ಅಂತರ್ಜಲವನ್ನು ತಲುಪಿ ಎಲ್ಲ ಡಿಸ್ಟಿಲರಿ ಕೈಗಾರಿಕೆ ಮತ್ತು ಬಯೋ-ಕಾಂಪೋಸ್ಟಿಂಗ್ ಘಟಕಗಳ ಸುತ್ತಲಿನ ಅಂತರ್ಜಲವೆಲ್ಲ ಮಲಿನಗೊಂಡಿದೆ. ಕನರ್ಾಟಕ ಸಕರ್ಾರದ ಅರಣ್ಯ & ಪರಿಸರ ಇಲಾಖೆಯು ಹೊರತಂದಿರುವ ಪರಿಸರದ ಸ್ಥಿತಿಗತಿ, 2003 ರ ವರದಿಯಲ್ಲಿ ದಾಖಲಿಸಿರುವಂತೆ, ಡಿಸ್ಟಿಲರಿ ಕಾಖರ್ಾನೆಯ ಸ್ಪೆಂಟ್ ವಾಷ್(ಕಲುಷಿತ) ನೀರನ್ನು ಸಂಸ್ಕರಣೆ ಮಾಡಲು ಬಳಸುತ್ತಿರುವ ಕಾಂಪೋಸ್ಟಿಂಗ್ ವಿಧಾನವು ಬಹುಮಟ್ಟಿಗೆ ನ್ಯೂನತೆಗಳನ್ನು ಹೊಂದಿರುವ ತಂತ್ರಜ್ಞಾನವಾಗಿದೆ. ಆದರೆ, ಬಹುತೇಕ ಡಿಸ್ಟಿಲರಿ ಕೈಗಾರಿಕೆಗಳು ಕಡಿಮೆ ವೆಚ್ಚದ ತಂತ್ರಜ್ಞಾನವಾದ್ದರಿಂದ ಇದೇ ವಿಧಾನವನ್ನು ಅಳವಡಿಸಿಕೊಳ್ಳಲು ಹೆಚ್ಚಿನ ಉತ್ಸುಕತೆ ತೋರಿಸುತ್ತವೆ. ಸೋಡಿಯಂ ಲವಣಗಳು, ಸಸ್ಪೆಂಡೆಡ್ ಕಣಗಳು, ಟ್ಯಾನಿನ್ಸ್ಗಳು, ಪ್ರಧಾನ ಮಲಿನಕಾರಕಗಳಾಗಿದ್ದು ಇವು ಈ ಕಾಖರ್ಾನೆಗಳಲ್ಲಿ ಕೆಲಸ ಮಾಡುವ ಕಾಮರ್ಿಕರಿಗೆ ಮತ್ತು ಸುತ್ತಮುತ್ತಲು ವಾಸಿಸುವ ಜನರಿಗೆ ಉಸಿರಾಟದ ತೊಂದರೆಗಳು ಸೇರಿದಂತೆ ಬ್ರಾಂಚಿಟಿಸ್, ಇಂಟರ್ಸ್ಟಿಷಿಯಲ್ ನ್ಯೂಮೋನಿಯ, ಲಿಪಿಡ್ ನ್ಯೂಮೋನಿಯಾಸ್ ಗಳಂಥಹ ಕಾಯಿಲೆಗಳನ್ನು ತರುತ್ತದೆ. ಇಂಥಹ ಕೈಗಾರಿಕೆಗಳನ್ನು ಜನವಸತಿ ಕೇಂದ್ರಗಳಿಂದ ಹಾಗೂ ಕೆರೆ, ಕಾಲುವೆಗಳಿಂದ ಅತಿ ದೂರದಲ್ಲಿ ಸ್ಥಾಪಿಸುವುದೊಂದೇ ಸದ್ಯಕ್ಕೆ ಲಭ್ಯವಿರುವ ಪರಿಹಾರ. ಅಂತರ್ಜಲ ಮಾಲಿನ್ಯದಿಂದ ಅಲ್ಲಿನ ಬೋರ್ವೆಲ್ನಲ್ಲಿ ಕೆಂಪು ಕಲುಷಿತ ನೀರು ಬಂದು ನೀರು ಕುಡಿಯಲು ಬಾರದಂತಾಗಿದೆ. ಮಣ್ಣು ಫಲವತ್ತತೆ ಕಳೆದುಕೊಂಡು ಕೃಷಿಗೆ ಬಾರದಂತಾಗಿದೆ. ವಿಷಕಾರಿ ವಾಸನೆಯಿಂದ ವಾತಾವರಣದ ಗಾಳಿ ಮಾರಣಾಂತಿಕವಾಗಿದೆ. ಜನರಿಗೆ ತಲೆನೋವು, ಚರ್ಮರೋಗ, ಮಾನಸಿಕ ಅಸ್ವಸ್ಥತೆ ಉಂಟಾಗುತ್ತಿದೆ. ಭತ್ತ, ಕಬ್ಬು ಹಾಗೂ ರೇಷ್ಮೆ ಬೆಳೆಗೆ ರೋಗ ಬಂದು ಅದರ ಇಳುವರಿ ಸ್ಥಗಿತಗೊಳ್ಳುತ್ತಿದೆ. ಹುಟ್ಟುವ ಮಕ್ಕಳು ವಾಸನೆಯಿಂದಾಗಿ ಹಾಲು ಕುಡಿಯುವುದಿಲ್ಲ ಹಾಗೂ ಮನುಷ್ಯರು ಅಸ್ವಸ್ಥರಾಗುತ್ತಾರೆ. ದನಕರುಗಳು ಕಲುಷಿತ ನೀರು ಕುಡಿದು ಸಾಯುತ್ತಿವೆ. ಶಾಲೆಗಳಲ್ಲಿ ಮಕ್ಕಳು ಪಾಠ ಕೇಳಲಾಗುವುದಿಲ್ಲ ಹಾಗೂ ಶಿಕ್ಷಕರು ವರ್ಗ ಮಾಡಿಸಿಕೊಂಡು ಊರು ಬಿಡುತ್ತಿದ್ದಾರೆ.
ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳು ಪರಿಸರ ಮಾಲಿನ್ಯ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಮುಂಬರುವ ದಿನಗಳಲ್ಲಿ ಪರಿಸರ ಸಂರಕ್ಷಣೆಯೆಂಬುದು ನಿಯಂತ್ರಣಕ್ಕೆ ಸಿಗದಂತಾಗುವುದರಲ್ಲಿ ಸಂದೇಹವಿಲ್ಲ.
ಆಧಾರ:
1) ಸ್ಟೇಟ್ ಆಫ್ ದಿ ಎನ್ವಿರಾನ್ಮೆಂಟ್ ರಿಪೋಟರ್್ ಅಂಡ್ ಆಕ್ಷನ್ ಪ್ಲಾನ್ - 2003, ಅರಣ್ಯ ಮತ್ತು ಪರಿಸರ ಇಲಾಖೆ, ಕನರ್ಾಟಕ ಸಕರ್ಾರ.
2) ಡಿಸ್ಟಿಲರ್ ಕಾಖರ್ಾನೆಯ ಸ್ಥಿತಿಗತಿ ಅಧ್ಯಯನ ವರದಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ನವದೆಹಲಿ.
3) ಡಿಸ್ಟಿಲರ್ ಕಾಖರ್ಾನೆಯ ಕುರಿತಾದ ವರದಿ, ಡಾ: ಹೆಚ್.ಸಿ ಜೋಷಿ, ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ (ಯುಎನ್ಡಿಪಿ).
4) ಪ್ರಂಟ್ ಲೈನ್ ಆಂಗ್ಲ ಮ್ಯಾಗಜೈನ್ ಪತ್ರಿಕೆ, ಮೇ 08-21, 2004.

ಒಂದೇ ರಾಕೆಟ್ನಲ್ಲಿ ಹತ್ತು ಉಪಗ್ರಹಗಳ ಉಡಾವಣೆ: ಬಾಹ್ಯಾಕಾಶ ಸಂಸ್ಥೆ ಇಸ್ತ್ರೋ ಮತ್ತೊಂದು ಹೆಜ್ಜೆ




ಈ ಬಾರಿ ಹತ್ತು ಉಪಗ್ರಹಗಳನ್ನು ಇಸ್ತ್ರೋ ಸಂಸ್ಥೆಯು ಒಂದೇ ರಾಕೆಟ್ ವಾಹನದಲ್ಲಿ ಅಂತರಿಕ್ಷಕ್ಕೆ ಯಶಸ್ವಿಯಾಗಿ ಕಳುಹಿಸಿರುವುದು ಎಲ್ಲೆಡೆ ಸುದ್ದಿಯಾಗಿದೆ. 230 ಟನ್ ತೂಕದ ಪಿಎಸ್ಎಲ್ವಿ-ಸಿ9 ಹೆಸರಿನ ರಾಕೆಟ್, 824 ಕೆಜಿ ತೂಕವಿರುವ ಹತ್ತು ಉಪಗ್ರಹಗಳ ಭಾರವನ್ನು ಹೊತ್ತೊಯ್ದಿತು. ಭೂಮಿಯಿಂದ 637 ಕಿ.ಮೀ ಎತ್ತರದಲ್ಲಿ ರುವ ಭೂಮಿಯ ಸುತ್ತಲೂ ಇರುವ ಅಂತರಿಕ್ಷದ ಕಕ್ಷೆಗೆ ಹತ್ತು ಉಪಗ್ರಹಗಳನ್ನು ತಲುಪಿಸಿತು. ಉಪಗ್ರಹವು ಅನುಸರಿಸುವ ಪಥವನ್ನು ಕಕ್ಷೆಯೆನ್ನುತ್ತಾರೆ. ಹೀಗೆ ಉಡಾವಣೆಗೊಂಡ ಎಲ್ಲ ಉಪಗ್ರಹಗಳು ಭೂಮಿಯ ಮೇಲಿನ ನಿಯಂತ್ರಣ ಕೇಂದ್ರಗಳಿಗೆ ಸಂದೇಶ ರವಾನಿಸುತ್ತಿವೆ. ಭಾರತ ಇದೇ ಪ್ರಥಮ ಸಲ ಒಂದೇ ಬಾರಿಗೆ ಹತ್ತು ಉಪಗ್ರಹಗಳನ್ನು ಉಡ್ಡಯನ ಮಾಡಿರುವುದು. ಅತಿ ಹೆಚ್ಚು ತೂಕದ ಉಪಗ್ರಹಗಳನ್ನು ಕಳುಹಿಸಿರುವುದು ವಿಶ್ವ ದಾಖಲೆಯೇ ಸರಿ. ಈ ಹಿಂದೆ, 2007ರಲ್ಲಿ ಒಟ್ಟು 300 ಕೆಜಿ ತೂಕವುಳ್ಳ 16 ಉಪಗ್ರಹಗಳನ್ನು ರಷ್ಯಾ ಉಡ್ಡಯನ ಮಾಡಿತ್ತು.
ಪಿಎಸ್ಎಲ್ವಿ-ಸಿ9 ರಾಕೆಟ್ ಉಡಾವಣೆ: ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಪಿಎಸ್ಎಲ್ವಿ-ಸಿ9 ರಾಕೆಟ್ ಒಟ್ಟು 1,151 ಸೆಕೆಂಡ್ಗಳ ಕಾಲ ಪಯಣಿಸಿತು. ಇದರಲ್ಲಿ ಭಾರತದ್ದೇ ಆದ 690 ಕೆಜಿ ತೂಕದ ಕಾಟರ್ೋಸ್ಯಾಟ್-2ಎ ಮತ್ತು 83 ಕೆಜಿ ತೂಕದ ಇಂಡಿಯನ್ ಮಿನಿ ಸ್ಯಾಟಲೈಟ್-1 (ಐಎಂಎಸ್-1) ಎಂಬ ಎರಡು ದೂರ-ಸಂವೇದಿ ಉಪಗ್ರಹಗಳನ್ನು ಸಹ ಇದ್ದವು. ಉಳಿದವು ಕೆನಡಾ ಮತ್ತು ಜರ್ಮನಿಯ ವಿಶ್ವವಿದ್ಯಾನಿಲಯಗಳು ಸಿದ್ದಪಡಿಸಿದ್ದ ಎಂಟು ನ್ಯಾನೋ ಉಪಗ್ರಹಗಳು. ಕಾಟರ್ೋಸ್ಯಾಟ್-2ಎ ಉಪಗ್ರಹದಲ್ಲಿ ಅತ್ಯಾಧುನಿಕ ಗುಣಮಟ್ಟದ ಪಾನ್ಕ್ರೋಮ್ಯಾಟಿಕ್ ಕ್ಯಾಮೆರಾ ಇದ್ದು, ಅದರಿಂದ ದೊರೆಯುವ ಒಂದು ಮೀಟರ್ ಅಂತರದ ಚಿತ್ರಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶದ ರಸ್ತೆಗಳು, ವತರ್ುಲ ರಸ್ತೆಗಳು, ವಸತಿಗೃಹ ಪ್ರದೇಶಗಳಂಥಹ ಮ್ಯಾಪಿಂಗ್ ಕಾರ್ಯಗಳಿಗೆ ಬಳಸಬಹುದು. ಐಎಂಎಸ್-1 ಉಪಗ್ರಹದಲ್ಲಿ ಎರಡು ಕ್ಯಾಮೆರಾಗಳಿದ್ದು, ಇದು ಎರಡು ವರ್ಷಗಳವರೆಗೂ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ.
ಕೆನಡಾ ಮತ್ತು ಜರ್ಮನಿ ದೇಶದ ವಿಶ್ವವಿದ್ಯಾಲಗಳು ಹಾರಿಬಿಟ್ಟಿರುವ ಉಪಗ್ರಹಗಳಿಂದ ಉತ್ತೇಜಿತಗೊಂಡಿರುವ ಇತರೆ ರಾಷ್ಟ್ರಗಳ ಹಲವಾರು ವಿಶ್ವವಿದ್ಯಾಲಯಗಳು ಕೂಡ ಉಪಗ್ರಹ ಉಡ್ಡಯನ ಯೋಜನೆಯನ್ನು ಹಾಕಿಕೊಂಡಿವೆ. ನಮ್ಮ ದೇಶದ ಐಐಟಿ-ಕಾನ್ಪುರ ಸಂಸ್ಥೆಯು ಕೂಡ ಅಂಥಹದೊಂದು ಯೋಜನೆಯಲ್ಲಿ ನಿರತವಾಗಿದೆ.
ಇಸ್ತ್ರೋ ಮತ್ತು ಪಿಎಸ್ಎಲ್ವಿ ರಾಕೆಟ್ಗಳು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ತ್ರೋ)ಯು ಸಿದ್ದಪಡಿಸಿರುವ ಈ ರಾಕೆಟ್ಗೆ ಪಿಎಸ್ಎಲ್ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಎಂದು ಹೆಸರು. ಬೆಂಗಳೂರಿನಲ್ಲಿರುವ ಇಸ್ತ್ರೋ ಉಪಗ್ರಹ ಕೇಂದ್ರವು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಒಂದಾಗಿದ್ದು ಉಪಗ್ರಹ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಕೇಂದ್ರ. ಎಲ್ಲ ಭಾರತೀಯ ಉಪಗ್ರಹಗಳ ವಿನ್ಯಾಸ, ತಯಾರಿಕೆ, ಜೋಡಣೆ, ಪರೀಕ್ಷಣೆ ಹಾಗೂ ಉಡಾವಣಾ ಪೂರ್ವ ಮತ್ತು ಉಡಾವಣಾ ನಂತರದ ಕಾರ್ಯಯೋಜನೆಗಳು ಈ ಕೇಂದ್ರದ ಮುಖ್ಯ ಕಾರ್ಯಗಳಾಗಿವೆ. ಇದುವರೆಗೆ 45 ಉಪಗ್ರಹಗಳನ್ನು ಈ ಸಂಸ್ಥೆಯು ತಯಾರಿಸಿದ್ದು, ಇದರಲ್ಲಿ ಸಂಪರ್ಕ, ದೂರಸಂವೇದಿ ಉಪಗ್ರಹಗಳಲ್ಲದೆ ವೈಜ್ಞಾನಿಕ ಪ್ರಯೋಗಗಳಿಗೆ ಮೀಸಲಾದ ಉಪಗ್ರಹಗಳೂ ಸೇರಿವೆ.
ಪ್ರಥಮ ಬಾರಿಗೆ ಪಿಎಸ್ಎಲ್ವಿ ಮಾದರಿಯ ರಾಕೆಟ್ನ್ನು ಇಸ್ತ್ರೋ ಸಂಸ್ಥೆಯು 1994ರಲ್ಲಿ ಯಶಸ್ವಿಯಾಗಿ ಹಾರಿಬಿಟ್ಟಿತ್ತು. ಅಲ್ಲಿಂದೀಚೆಗೆ ಒಟ್ಟು 13 ಬಾರಿ ಉಡಾವಣೆಗೊಂಡಿರುವ ಈ ಮಾದರಿಯ ರಾಕೆಟ್ಗಳು ಒಂದು ಬಾರಿಯಷ್ಟೆ ವಿಫಲವಾಗಿವೆ. ಈ ವಾಹನಗಳ ಯಶಸ್ಸಿನಿಂದಾಗಿ ಭಾರತವು ಹಲವಾರು ಭೂಮಿ-ಸವರ್ೇಕ್ಷಣಾ ಉಪಗ್ರಹಗಳನ್ನು ಉಡಾವಣೆ ಮಾಡಲು ಸಾಧ್ಯವಾಗಿದೆ. ಭೂಮಿ-ಸವರ್ೇಕ್ಷಣಾ ಉಪಗ್ರಹಗಳು ನಮಗೆ ಅಗಾಧ ಪ್ರಮಾಣದಲ್ಲಿ ಉಪಯುಕ್ತವೆನಿಸಿವೆ. ಬೆಳೆ ವಿಸ್ತೀರ್ಣದ ಅಂದಾಜು ಲೆಕ್ಕವನ್ನು ಉತ್ತಮವಾಗಿ ನೀಡುತ್ತಿವೆ, ಬರಪೀಡಿತ ವಲಯಗಳ ಗುರುತು ಹಚ್ಚುವುದು, ಅರಣ್ಯ ನಾಶ ಕುರಿತ ಮಾಹಿತಿ, ನೈಸಗರ್ಿಕ ವಿಕೋಪ ಪರಿಹಾರ ಕಾರ್ಯಗಳಿಗೆ ಮಾಹಿತಿ ನೀಡುತ್ತಿವೆ, ಇತ್ಯಾದಿ.
ಪಿಎಸ್ಎಲ್ವಿ ಮಾದರಿಯ ರಾಕೆಟ್ಗಳು ಭಾರತದ ಉಪಗ್ರಹ ಉಡಾವಣೆಯಲ್ಲಿ ಬೆನ್ನೆಲುಬಾಗಿದ್ದರೂ, ಜಾಗತಿಕ ಉಪಗ್ರಹ ಉಡಾವಣೆ ಮಾರುಕಟ್ಟೆಯಲ್ಲಿ ಭಾರತವಿನ್ನೂ ಅಂಬೆಗಾಲು ಇಡುತ್ತಿದೆ. ಏಕೆಂದರೆ, ಯೂರೋಪಿನ ಏರಿಯಾನ್ 5 ರಂಥಹ ರಾಕೆಟ್ಗಳು ಅಗಾಧ ಭಾರದ ಸಂವಹನ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲ ಸಾಮಥ್ರ್ಯ ಹೊಂದಿವೆ. ಇಂಥಹ ಮಾರುಕಟ್ಟೆ ವ್ಯಾಪ್ತಿಯಲ್ಲಿ ಭಾರತದ ಪಿಎಸ್ಎಲ್ವಿ ಮತ್ತು ಜಿಎಸ್ಎಲ್ವಿ (ಭೂ-ಸ್ಥಿರ ಉಪಗ್ರಹ ಉಡಾವಣಾ ವಾಹನ) ರಾಕೆಟ್ಗಳು ಸ್ಪಧರ್ಿಸಲಾರವು. ಅತಿ ಹೆಚ್ಚು ತೂಕ ಹೊರುವ ಮತ್ತು ಅತ್ಯಾಧುನಿಕ ಗುಣಮಟ್ಟದ ರಾಕೆಟ್ಗಳು ಅವಶ್ಯವಿರುವ ಸ್ಪಧರ್ಾತ್ಮಕ ಮಾರುಕಟ್ಟೆಗೆ ಭಾರತ ಪ್ರವೇಶಿಸಬೇಕಾದರೆ ಇನ್ನೆರಡು ವರ್ಷಗಳಲ್ಲಿ ಸಿದ್ದಗೊಳ್ಳುವ ಜಿಎಸ್ಎಲ್ವಿ ಮಾಕರ್್-3 ಯಶಸ್ಸುಗೊಂಡ ನಂತರವಷ್ಟೆ ಸಾಧ್ಯ.
ಚಂದ್ರಯಾನ - 1 :ಇದೇ ವರ್ಷದ ಕೊನೆಯ ಭಾಗದಲ್ಲಿ 500 ಕೆಜಿ ತೂಕದ ಉಪಗ್ರಹವನ್ನು ಉಡಾವಣೆ ಮಾಡಲು ಇಸ್ತ್ರೋ ಸಿದ್ದತೆ ನಡೆಸಿದೆ. ಚಂದ್ರನಲ್ಲಿರುವ ನೆಲದ ಮೇಲ್ಮೈಯನ್ನು ಶೋಧಿಸಿ ಅದರ ಚಿತ್ರಣ ಕುರಿತಂತೆ ಮಾಹಿತಿ ಮತ್ತು ಚಿತ್ರಗಳನ್ನು ತರಲು ಚಂದ್ರಯಾನ - 1 ಎಂಬ ಹೆಸರಿನ ಯೋಜನೆಯನ್ನು ಇಸ್ತ್ರೋ ರೂಪಿಸಿದೆ.