Monday, December 15, 2008

ಸ್ವತಂತ್ರ ತಂತ್ರಾಂಶ ಚಳುವಳಿಯ ನೇತಾರ ಎಬೆನ್ ಮಾತಿನ ಮೋಡಿಗೆ ಬೆರಗಾದ ಪರಿ


೧೩ನೇ ಡಿಸೆಂಬರ್ ಶನಿವಾರದ ಸಂಜೆ ಕ್ವೀನ್ಸ್ ರಸ್ತೆಯ IAT ಸಭಾಂಗಣದಲ್ಲಿ ನಿಜಕ್ಕೂ ಹಬ್ಬದ ವಾತಾವರಣದ ಕಳೆ ಮೂಡಿಸಿತ್ತು. ಗಂಟೆ ಐದಾಗುತ್ತಿದ್ದಂತೆ ಬೆಂಗಳೂರಿನ ಮೂಲೆ ಮೂಲೆಯಿಂದ ಕನ್ನಡದ ಬ್ಲಾಗ್ಗರುಗಳು ಅಲ್ಲಿ ನೆರೆಯತೊಡಗಿದರು. ಸ್ವತಂತ್ರ ತಂತ್ರಾಂಶದ ಕುರಿತು ಹೆಚ್ಚೆಚ್ಚು ತಿಳಿದುಕೊಳ್ಳುವ, ಸ್ವತಂತ್ರ ತಂತ್ರಾಂಶ ಚಳುವಳಿಯ ನೇತಾರರಲ್ಲೊಬ್ಬರಾದ ಎಬೆನ್ ಮೊಗ್ಲೆನ್ ರವರ ಮಾತು ಕೇಳಲು ಅವರು ಹಣಿಯಾಗಿ ಬಂದಿದ್ದರು.

ಸುಮಾರು ೮೦ ಜನ ಪ್ರೇಕ್ಷಕರಲ್ಲಿ ಶಾಲಾ ಕಾಲೇಜುಗಳಿಂದ ಬಂದಿದ್ದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿದ್ದರು, ಹಲವು ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಮಾಡುವ ಸಾಫ್ಟ್ವೇರ್ ತಂತ್ರಜ್ಞರು, ಡಾ: ಬಿ. ಅರ್. ಅಂಬೇಡ್ಕರ್ ಸಮುದಾಯ ಗಣಕ ತರಬೇತಿ ಕೇಂದ್ರದ ಕಾರ್ಯಕರ್ತರು, ಪತ್ರಿಕಾ ಮತ್ತು ಟಿ. ವಿ. ಮಾಧ್ಯಮದ ಮಿತ್ರರು ಎಲ್ಲರೂ ನೆರೆದಿದ್ದರು. ಇಂಗ್ಲಿಷ್ ಬಾರದವರು, ಕನ್ನಡ ಬಾರದವರು ಎಲ್ಲರೂ ಅಲ್ಲಿದ್ದರು.

ಸ್ವತಂತ್ರ ತಂತ್ರಾಂಶ ಎಂದರೇನು? ಅದರ ಉಪಯೋಗಗಳು ಏನು? ಡಿಜಿಟಲ್ ತಂತ್ರಜ್ಞಾನ ಯಾರ ಒಡೆತನದಲ್ಲಿದೆ? ತಂತ್ರಾಂಶಗಳಿಗೆ ಮಾಲೀಕರು ಕಂಪನಿಗಳೋ ಅಥವಾ ಸಮುದಾಯವೋ? ಹೀಗೆ ಹತ್ತಲವು ಪ್ರಶ್ನೆ ಹೊತ್ತು ಅಲ್ಲಿಗೆ ಬಂದಿದ್ದರು.

ಮತ್ತೊಬ್ಬ ಅತಿಥಿಗಳಾದ ಸಂಪದ.ನೆಟ್ ಸ್ಥಾಪಕರಾದ ಹರಿ ಪ್ರಸಾದ್ ನಾಡಿಗ್ ಬಂದಿದ್ದರು.

ಸುಮಾರು ಒಂದೂವರೆ ಗಂಟೆ ಕಾಲ ಮಾತಾಡಿದ ಎಬೆನ್, ಅರ್ಧ ತಾಸು ಪ್ರಶ್ನೆಗಳಿಗೆ ಉತ್ತರ ನೀಡಿದರು. ಕಾರ್ಯಕ್ರಮ ಮುಗಿದ ಕೂಡಲೇ ಅರ್ಧ ತಾಸಾದರೂ ಅಲ್ಲಿಂದ ಯಾರು ಕದಲದೆ ಅಲ್ಲಲ್ಲಿ ಗುಂಪು ಗುಂಪಾಗಿ ಚರ್ಚೆಯಲ್ಲಿ ಮುಳುಗಿದ್ದು ಆಕರ್ಷಣೀಯವಾಗಿತ್ತು.

ಎಬೆನ್ ಮಾತಿನ ಮೋಡಿಗೆ ಬೆರಗಾದವರು ಖುಷಿ ಪಟ್ಟರು, ಜಾಗತಿಕ ಡಿಜಿಟಲ್ ತಂತ್ರಜ್ಞಾನ ಲೋಕದ ರಾಜಕೀಯವನ್ನು ಹಲವರು ಆಸ್ವಾದಿಸಿದರು. ಏನೂ ಅರ್ಥವಾಗದ ಕೆಲ ಮಂದಿ ಕೆಲ ಕಾಲ ಎಬೆನ್ ಕಡೆಗೆ, ಅವರ ಹಾವಭಾವ ರಸಾಸ್ವಾದಿಸಿ ಕೊನೆಗೆ ಆಕಳಿಸಿದರು.

ಕಾರ್ಯಕ್ರಮದ ಚಿತ್ರಗಳು ಮತ್ತು ಎಬೆನ್ನರ ಪೂರ್ಣ ಭಾಷಣವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು.

Monday, December 8, 2008

ಬೆಂಗಳೂರಿನಲ್ಲಿ ಎಬೆನ್ ಮೊಗ್ಲೆನ್ ರವರಿಂದ ಉಪನ್ಯಾಸ

ಫ್ರೀ ಸಾಫ್ಟ್ವೇರ್ ಮೊವ್ ಮೆಂಟ್ ಗುಂಪು ಮತ್ತು ಅವಧಿ.ವರ್ಡ್ಪ್ರೆಸ್ .ಕಾಂ

ವತಿಯಿಂದ



ಉಪನ್ಯಾಸ:

"ಫ್ರೀ ಸಾಫ್ಟ್ವೇರ್ ಇನ್ ನ್ಯೂ ಮೀಡಿಯಾ ಮತ್ತು ಪ್ರಾದೇಶಿಕ ಭಾಷೆ "



ಮುಖ್ಯ ಭಾಷಣಕಾರರು:

ಎಬೆನ್ ಮೊಗ್ಲೆನ್ ,

ಮುಖ್ಯಸ್ಥರು, ಸಾಫ್ಟ್ವೇರ್ ಫ್ರೀದಂ ಲಾ ಸೆಂಟರ್, ಕೊಲಂಬಿಯಾ


ಅತಿಥಿಗಳು:

ಹರಿ ಪ್ರಸಾದ್ ನಾಡಿಗ್,
ಮುಖ್ಯಸ್ಥರು, ಸಂಪದ, ಕನ್ನಡ ವಿಕಿಪಿಡಿಯಾ

ಏನ್. ಎ. ಎಂ. ಇಸ್ಮಾಯಿಲ್,
ಪತ್ರಕರ್ತರು, ಉದಯವಾಣಿ.

ದಯವಿಟ್ಟು ಬನ್ನಿ.


ದಿನಾಂಕ ಮತ್ತು ಸಮಯ:
೧೩ ನೆ ಡಿಸೆಂಬರ್, ಶನಿವಾರ, ಸಂಜೆ ೫ ಗಂಟೆಗೆ .


ಸ್ಥಳ:
Institute of Agicultural Technologists (IAT),
ಸಂಜೆವಾಣಿ ಎದುರು, ನಂಬರ್. ೧೫,
ಕ್ವೀನ್ಸ್ ರಸ್ತೆ, ಬೆಂಗಳೂರು - ೫೨.
ಮೊ: ೯೪೪೮೧೬೩೪೫೩ , ೯೪೮೦೩೧೧೦೦೬, ೯೯೦೨೦೩೧೩೮೦ .

ಎಬೆನ್ ಮೊಗ್ಲೆನ್

ಎಬೆನ್ ಮೊಗ್ಲೆನ್ ಅವರದ್ದು ಸ್ವತಂತ್ರ ಸಾಫ್ಟ್ ವೇರ್ ಚಳುವಳಿಯಲ್ಲಿ ಅತ್ಯಂತ ದೊಡ್ಡ ಹೆಸರು. ಸಂಸ್ಕೃತಿ ಎಂಬುದು ಅದೇಗೆ ಆಸ್ತಿಯಾಯಿತು ಮತ್ತು ಅದರ ಕುರಿತಾಗಿ ನಾವೇನು ಮಾಡಬೇಕೆಂಬ ಅವರ ವಿಶ್ಲೇಷಣೆಯು ವಿಶ್ವದಾದ್ಯಂತ ಪ್ರಮುಖ ಚರ್ಚೆ ಹುಟ್ಟು ಹಾಕಿದೆ.

ಫ್ರೀ ಸಾಫ್ಟ್ ವೇರ್ ಚಳವಳಿಯ ಜನಕ ಎಂದೆ ಕರೆಯಬಹುದಾದ ಎಬೆನ್ ಈ ವಾರ ಬೆಂಗಳೂರಿನಲ್ಲಿರುತ್ತಾರೆ. ಕರ್ನಾಟಕದ ಫ್ರೀ ಸಾಫ್ಟ್ ವೇರ್ ಮೂವ್ಮೆಂಟ್ ‘ಅವಧಿ’ಯ ಜೊತೆ ಸೇರಿ ನಡೆಸುತ್ತಿರುವ ಉಪನ್ಯಾಸಕ್ಕೆ ಪೂರಕವಾಗಿ ಈ ಲೇಖನ -

Eben Moglen and Free Software Movement




Eben Moglen is a professor of law and legal history at Columbia University, and is the founder, Director-Counsel and Chairman of Software Freedom Law Center, whose client list includes numerous pro bono clients, such as the Free Software Foundation.

ಫ್ರೀ ಸಾಫ್ಟ್ ವೇರ್ , ಹೊಸ ಮಾಧ್ಯಮ ಮತ್ತು ಪ್ರಾದೇಶಿಕ ಭಾಷೆಗಳು

ಫ್ರೀ ಸಾಫ್ಟ್ವೇರ್ ಎಂದರೆ, ನಕಲು ಮಾಡುವ, ಮೂಲ ತಂತ್ರಾಂಶದೊಂದಿಗೆ ವಿತರಿಸುವ, ಮಾರ್ಪಡಿಸುವ ಮತ್ತು ಹೊಸ ಕ್ಷೇತ್ರಕ್ಕೆ ಅನ್ವಯಿಸುವ ಎಲ್ಲ ಸ್ವಾತಂತ್ರ್ಯಗಳನ್ನು ಅದು ಬಳಕೆದಾರರಿಗೆ ನೀಡುತ್ತದೆ. ಆದರೆ, ಮಾಲೀಕತ್ವದ ಸಾಫ್ಟ್ ವೇರ್ ಮೂಲ ತಂತ್ರಾಂಶವನ್ನು (Proprietary software) ಬಳಕೆದಾರರಿಗೆ ನಿರಾಕರಿಸುವ ಮೂಲಕ ಎಲ್ಲ ಸ್ವಾತಂತ್ರ್ಯಗಳನ್ನು ಹತ್ತಿಕ್ಕುತ್ತವೆ.
ನಾವಿಂದು ಡಿಜಿಟಲ್ ಯುಗದಲ್ಲಿದ್ದೇವೆ ಮತ್ತು ಡಿಜಿಟಲ್ ಯುಗದಲ್ಲಿ ಅತ್ಯಂತ ಮೂಲ ತಳಪಾಯವೆಂದರೆ ಆಪರೇಟಿಂಗ್ ಸಿಸ್ಟಮ್. ಆದ್ದರಿಂದ, ಯಾವುದೇ ರಾಷ್ಟ್ರವು ಈ ತಳಪಾಯವನ್ನು ನಿಯಂತ್ರಿಸಲು ಸೂಕ್ತ ಶ್ರಮವಹಿಸಬೇಕು. ತನ್ನ ಪಾರದರ್ಶಕತೆಯಿಂದಾಗಿ, ಭಾರತಕ್ಕೆ ಗ್ನೂ/ಲಿನಕ್ಸ್ ಅಂತದೊಂದು ಆಕರ್ಷಕ ತಳಪಾಯವೆನಿಸಿದೆ. ಡಿಜಿಟಲ್ ತಂತ್ರಜ್ಞಾನವು ಹೊಸ ಸಾಧ್ಯತೆಗಳನ್ನು ಸೃಷ್ಟಿಸಿದೆ. ವಸ್ತುವೊಂದನ್ನು (ಚಲನಚಿತ್ರಗಳು, ಲೇಖನಗಳು, ಹಾಡುಗಳು) ಒಂದು ಬಾರಿ ಸೃಷ್ಟಿಸಲು ತಗಲುವ ವೆಚ್ಚದಲ್ಲೇ ವಿಶ್ವದಾದ್ಯಂತ ವಿತರಿಸುವ ಸಂಸ್ಕೃತಿಯನ್ನು ಅದು ಸಾಧ್ಯಗೊಳಿಸಿದೆ. ಡಿಜಿಟಲ್ ತಂತ್ರಜ್ಞಾನದ ಲಾಭವನ್ನು ಎಲ್ಲ ಜನ ಸಮುದಾಯಕ್ಕೆ ತಲುಪಿಸಲು ಗ್ನೂ/ಲಿನಕ್ಸ್ (ಜಿಎನ್ಯು) ಒಂದು ಅತ್ಯುತ್ತಮ ಅವಕಾಶಗಳಲ್ಲೊಂದಾಗಿದೆ.
ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯದ ನೆಲೆಗಟ್ಟಿನಲ್ಲಿ ಹೇಳುವುದಾದಲ್ಲಿ, ಡಿಜಿಟಲ್ ಕಾಲಯುಗದಲ್ಲಿ ಭಾರತದ ಭವಿಷ್ಯಕ್ಕೆ ಗ್ನೂ/ಲಿನಕ್ಸ್ ಏಕೆ ಸಂದರ್ಭೋಚಿತವಾಗಿದೆ ಎನ್ನುವುದಕ್ಕೆ ಹತ್ತಲವು ಕಾರಣಗಳಿವೆ. ಬಹುತೇಕ ಎಲ್ಲ ಸಾಫ್ಟ್ ವೇರ್ ಗಳು ಮತ್ತು ಆಪರೇಟಿಂಗ್ ಸಿಸ್ಟಂ ಗಳು ಭಾರತದಲ್ಲಿ ಕೇವಲ ಶೇಕಡಾ 5 ರಷ್ಟು ಜನರಷ್ಟೇ ಮಾತನಾಡುವ ಇಂಗ್ಲೀಷ್ ಭಾಷೆಯಲ್ಲಿವೆ. ಪ್ರಾದೇಶಿಕ ಭಾಷೆಯಲ್ಲಿ ಕಂಪ್ಯೂಟರ್ ಲಭ್ಯವಿರಬೇಕಾದಲ್ಲಿ, ಗ್ನೂ/ಲಿನಕ್ಸ್ ಆಯ್ಕೆ ಮಾತ್ರವೇ ನಮ್ಮ ಮುಂದಿರುವುದು, ಏಕೆಂದರೆ ಮಾಲೀಕತ್ವದ ಆಪರೇಟಿಂಗ್ ಸಿಸ್ಟಮ್ಸ್ ಗಳನ್ನೂ ನಾವು ಮಾರ್ಪಡಿಸಲು ಸಾಧ್ಯವಿಲ್ಲ.
ಗ್ನೂ/ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ಸ್ ಸ್ವಾಭಾವಿಕ ಆಯ್ಕೆಯಾಗಿರುವುದೇಕೆಂದರೆ, ಯಾವುದೇ ಭಾಷೆಯೊಂದರೊಡನೆ ಅನುಸಂಧಾನ ನಡೆಸಲು ಅದು ಸ್ವಾತಂತ್ರ್ಯ ನೀಡುತ್ತದೆ. ಭಾರತದಂಥಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ತಲಾದಾಯವು 410 ಡಾಲರ್ ಗಳಷ್ಟಿದೆ. ಆಪರೇಟಿಂಗ್ ಸಿಸ್ಟಮ್ ಮತ್ತು ಬಳಕೆ ಮಾಡಬೇಕಾದ ಸಾಫ್ಟ್ ವೇರ್ ಗಳಿಗೆ ಅಷ್ಟು ವೆಚ್ಚ ತಗುಲಿದರೆ, ಭಾರತದ ಬಹುಸಂಖ್ಯಾತ ಜನರಿಗೆ ಈ ತಂತ್ರಜ್ಞಾನವನ್ನು ಪಡೆದುಕೊಳ್ಳಲು ಅಸಾಧ್ಯವಾಗುವುದು.
ತಲಾದಾಯವು ಸುಮಾರು 30 ಸಾವಿರ ಡಾಲರ್ ಗಳಿರುವ ಅಮೇರಿಕಾದಂಥಹ ರಾಷ್ಟ್ರಗಳಲ್ಲಿ ಅದನ್ನು ಪಡೆದುಕೊಳ್ಳಲು ಸಾಧ್ಯವಿರುವುದಷ್ಟೆ. ಆದ್ದರಿಂದ ಭಾರತಕ್ಕೆ ಬೇಕಾಗಿರುವುದು ರೂಪಾಯಿಗಳಲ್ಲಿರುವ ಸಾಫ್ಟ್ವೇರ್ ಹೊರತು ಡಾಲರ್ ಗಳಲ್ಲಿರುವುದಲ್ಲ ಮತ್ತು ಉಚಿತವಾಗಿ ಲಭ್ಯವಿರುವುದರಿಂದ ಗ್ನೂ/ಲಿನಕ್ಸ್ ಆ ಅವಶ್ಯಕತೆಯನ್ನು ಪೂರೈಸುತ್ತದೆ.
ಯೂ ಟ್ಯೂಬ್, ವಿಕಿಪೀಡಿಯಾ, ಗ್ನೋಮ್ ಇತ್ಯಾದಿ ಯಂಥಹ ಬಳಕೆದಾರರೇ ಸೃಷ್ಟಿಕಾರರೂ ಆಗಬಲ್ಲ, ಜನಸಮುದಾಯವೇ ಮಾಲೀಕರಾಗಬಲ್ಲ ಹೊಸ ಮಾಧ್ಯಮ ಲೋಕವನ್ನು ಸ್ವತಂತ್ರ ಮತ್ತು ಮುಕ್ತ ಸಾಫ್ಟ್ ವೇರ್ ತಂತ್ರಜ್ಞಾನವು ಅಭಿವೃದ್ಧಿಪಡಿಸಿರುವುದು ಆಶ್ಚರ್ಯವಾಗೇನೂ ಉಳಿದಿಲ್ಲ. ಇಂಟರ್ನೆಟ್ ಅನ್ನು ಅಭಿವೃದ್ಧಿ ಪಡಿಸಿರುವುದು ಮಾಹಿತಿಯನ್ನು ಹಂಚಿಕೊಳ್ಳುವ ಸಲುವಾಗಿ… ಆದರೆ, ಅದನ್ನು ಹಂಚಿಕೊಳ್ಳಲಾಗದು, ಲೈಸನ್ಸ್ ಪಡೆದುಕೊಳ್ಳಿ ಎಂದು ಕಂಪನಿಗಳು ತಾಕೀತು ಮಾಡುತ್ತಿವೆ.
ಇದರ ಹಿಂದೆಯೇ, ಡಿಜಿಟಲ್ ವಲಯದಲ್ಲಿ ಜ್ಞಾನವನ್ನು ಪ್ರಜಾಸತ್ತೆಗೊಳಿಸಲು ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಇಂಥಹ ಪ್ರಶ್ನೆಗಳು ಅಂದು ಮುದ್ರಣ ಮಾಧ್ಯಮದ ಅಸ್ತಿತ್ವದೊಡನೆ ಬಂದ ಪ್ರಶ್ನೆಗಳಷ್ಟೆ ಮಹತ್ವವುಳ್ಳವು. ಇದರಿಂದಾಗಿಯೇ ನಾವು ಐ ಪಾಡ್ ಗಳನ್ನು ಕಾಣುತ್ತಿದ್ದೇವೆ. . . ಇದರಿಂದಾಗಿಯೇ ಎಂ.ಜಿ ರಸ್ತೆಯಲ್ಲಿ ಪೈರೇಟ್ ಮಾಡಿರುವ ವಿಸಿಡಿ ಗಳನ್ನು ಕಾಣುತ್ತಿದ್ದೇವೆ. . . ಇದರಿಂದಾಗಿಯೇ ಸೋನಿ ಕಂಪನಿಯು ವಿತರಿಸುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಸಂಗೀತವನ್ನು ಇಂದಿನ ಮಕ್ಕಳು ವಿತರಿಸುವ ಕೆಲಸ ಮಾಡುತ್ತಿದ್ದಾರೆ. .
ಕಾರ್ಪೋರೆಟ್ ವಿಶ್ವವು ಅಕ್ಷಯಪಾತ್ರೆಯನ್ನು ಅದರಲ್ಲೂ ಡಿಜಿಟಲ್ ಅಕ್ಷಯಪಾತ್ರೆಯನ್ನು ಉತ್ಪಾದಿಸುವ ಬಯಕೆ ಹೊಂದಿದೆ ಎನ್ನಲಾಗುತ್ತಿದೆ. . ಆದರೆ ಅದು ನಿಜಕ್ಕೂ ಕಲಿಕೆ ಮತ್ತು ಹಂಚುವ ನೈಜ ಬಯಕೆಯನ್ನು ಹೊಂದಿದೆಯೇ? ಮಾಧ್ಯಮ, ಪತ್ರಿಕೋದ್ಯಮ, ಮತ್ತು ಸ್ಥಳೀಯ ಭಾಷೆಗಳು ಇನ್ನೂ ಏಕಸ್ವಾಮ್ಯ ಕಂಪನಿಗಳ ಸರಪಳಿಯಲ್ಲಿ ಬಂಧಿಯಾಗಿಯೇ ಉಳಿದಿವೆ. ಇದರಿಂದಾಗಿ ಲೈಸೆನ್ಸ್ ಹೆಸರಿನಲ್ಲಿ ಕಲಿಕೆಯನ್ನೇ ನಿಷೇಧಿಸಲಾಗುತ್ತಿದೆ.
ಒಂದು ಪರ್ಯಾಯ ಆಪರೇಟಿಂಗ್ ಸಿಸ್ಟಂ ಆಗಿ ಗ್ನೂ/ಲಿನಕ್ಸಿನ ಪ್ರವೇಶವು ಹಲವು ಬದಲಾವಣೆಗಳನ್ನು ತರುವುದರ ಜೊತೆಗೆ ಪ್ರೋಗ್ರ್ಯಾಮಿಂಗ್ ಮತ್ತು ಕಂಪ್ಯೂಟರ್ ಸಾಫ್ಟ್ವೇರ್ ಕ್ಷೇತ್ರದಲ್ಲಿ ಪ್ರಮುಖ ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತಿದೆ. ಇಂದು ಪುಸ್ತಕಗಳು ಹಕ್ಕು ಸ್ವಾಮ್ಯಕ್ಕೆ ಒಳಪಡುವುದಕ್ಕೆ ವಿರುದ್ದವಾಗಿ ಹಕ್ಕುಸ್ವಾಮ್ಯರಹಿತ ಗೊಳ್ಳುತ್ತಿವೆ. ಕ್ರಿಯೇಟಿವ್ ಕಾಮನ್ಸ್, ನಾಲೆಡ್ಜ್ ಕಾಮನ್ಸ್ ಎಂಬ ಹೊಸ ದೃಷ್ಟಿಕೋನಗಳು ವಿಶ್ವದೊಳಗೆ ಪಸರಿಸತೊಡಗಿವೆ. .
ಇದು ಭಾರತದ ಸಂದರ್ಭದಲ್ಲಿ ಸ್ವಾವಲಂಬನೆ ಕುರಿತಂತೆ ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತಿವೆ. ಡಿಜಿಟಲ್ ವಿಶ್ವದಲ್ಲಿ, ಡಿಜಿಟಲ್ ಜ್ಞಾನದ ಕೀಲಿಕೈ ಮಾಲೀಕರಾರು. . . ಅದು ಜನಸಮುದಾಯವೇ ಅಥವಾ ಹೊಸ ಈಸ್ಟ್ ಇಂಡಿಯಾ ಕಂಪನಿಯೇ? ನಾವು ಬಳಸುವ ಕಂಪ್ಯೂಟರ್ ಗೆ ನಾವು ಮಾಲೀಕರೆ ಅಥವಾ ಮೈಕ್ರೋಸಾಫ್ಟ್ ಕಂಪನಿಯೇ ಎಂಬ ಪ್ರಶ್ನೆಗಳು ಬಳಕೆದಾರರನ್ನು ಬಡಿದೆಬ್ಬಿಸುತ್ತವೆ.
ಭಾರತದ ಜನತೆಯಲ್ಲಿ ಕೇವಲ ಶೇ. 5 ಮಂದಿ ಮಾತನಾಡುವ ಇಂಗ್ಲೀಷ್ ಭಾಷೆಯಲ್ಲಿ ಮಾತ್ರವೇ ನಾವು ಸಾಫ್ಟ್ ವೇರ್ ಗಳನ್ನು ಉತ್ಪಾದಿಸುತ್ತಿದ್ದೇವೇಕೆ?

Monday, June 11, 2007

ನ್ಯೂಕ್ಲಿಯರ್ (ಅಣು) ಶಕ್ತಿಯಿಂದ ವಿದ್ಯುತ್ ತಯಾರಿಸುವುದು ಹೇಗೆ?

ನ್ಯೂಕ್ಲಿಯರ್ (ಅಣು) ಶಕ್ತಿಯಿಂದ ವಿದ್ಯುತ್ ತಯಾರಿಸುವುದು ಹೇಗೆ? ಉಷ್ಣ (ಥರ್ಮಲ್) ವಿದ್ಯುತ್ ಘಟಕಗಳಲ್ಲಿ ಸಾಮಾನ್ಯವಾಗಿ ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನ, ಇತ್ಯಾದಿಗಳನ್ನು ಉರುವಲಾಗಿ ಬಳಸಿ ಅದರಿಂದ ವಿದ್ಯುತ್ನ್ನು ಉತ್ಪಾದಿಸಲಾಗುತ್ತದೆ. ಉದಾಹರಣೆಗೆ: ರಾಯಚೂರು ಉಷ್ಣ ವಿದ್ಯುತ್ ಘಟಕ, ಇತ್ಯಾದಿ. ಆದರೆ ಅಣು ವಿದ್ಯುತ್ ಸ್ಥಾವರ ಘಟಕಗಳಲ್ಲಿ ಯುರೋನಿಯಂನ್ನು ಇಂಧನವಾಗಿ ಬಳಸಲಾಗುತ್ತದೆ. ಉದಾ: ಕೈಗಾ ಅಣು ಶಕ್ತಿ ವಿದ್ಯುತ್ ಘಟಕ, ಇತ್ಯಾದಿ. ವಿಶ್ವದಾದ್ಯಂತ, ಭೂಗರ್ಭದ ಶಿಲೆಗಳಲ್ಲಿ ಯುರೋನಿಯಂ ದೊರೆಯುತ್ತದೆ. ಫ್ರಾನ್ಸ್ನಲ್ಲಿ ದೇಶದ ಶೇ. 75ರಷ್ಟು ಅಣು ವಿದ್ಯುತ್ ಉತ್ಪಾದಿಸಿದರೆ, ಅಮೇರಿಕಾದಲ್ಲಿ ಶೇ. 15ರಷ್ಟು, ಮತ್ತು ಭಾರತದಲ್ಲಿ ಕೇವಲ ಶೇ. 3ರಷ್ಟು ಅಣುವಿದ್ಯುತ್ನ್ನು ಉತ್ಪಾದಿಸಲಾಗುತ್ತಿದೆ. ಅಣು ವಿದ್ಯುತ್:ವಸ್ತುವು ಮೂಲತ: ಮೂಲವಸ್ತುಗಳಿಂದ ರಚನೆಯಾಗಿರುತ್ತದೆ. ಮೂಲವಸ್ತುವಿನಲ್ಲಿ ಅತಿ ಸಣ್ಣ ಕಣಗಳಾದ ಪರಮಾಣುಗಳು ಒಂದಕ್ಕೊಂದು ಅಂಟಿಕೊಂಡಂತೆ ಒಂದು ನಿದರ್ಿಷ್ಟ ಆಕಾರದಲ್ಲಿ ಬಂಧಿಸಲ್ಪಟ್ಟಿರುತ್ತವೆ. ಅವುಗಳನ್ನು ಹಿಡಿದಿಟ್ಟಿರುವ ಬಂಧಕ್ಕೆ ಅಗಾಧ ಶಕ್ತಿಯಿದೆ. ಪ್ರತಿಯೊಂದು ಪರಮಾಣುವಿನ ಕೇಂದ್ರದಲ್ಲಿ ನ್ಯೂಕ್ಲಿಯಸ್ ಇದ್ದು ಅದರ ಸುತ್ತಲೂ ಎಲೆಕ್ಟ್ರಾನ್ಗಳು ಸುತ್ತುತ್ತಿರುತ್ತವೆ. ಒಂದು ಭಾರ ಪರಮಾಣುವಿನ ನ್ಯೂಕ್ಲಿಯಸ್ (ಉದಾಹರಣೆಗೆ: ಯುರೇನಿಯಂ)ನ್ನು ಎರಡು ಲಘು ಪರಮಾಣುಗಳಾಗಿ ವಿಭಜಿಸಿದಾಗ ಈ ಬೈಜಿಕ ಕ್ರಿಯೆಯಲ್ಲಿ ಅತೀವ ಪ್ರಮಾಣದ ಶಕ್ತಿಯು ಬಿಡುಗಡೆಯಾಗುತ್ತದೆ. ಇದನ್ನು ಬೈಜಿಕ ವಿದಲನ (ನ್ಯೂಕ್ಲಿಯರ್ ಫಿಜ:ನ್) ಕ್ರಿಯೆ ಎಂದು ಕರೆಯಲಾಗುತ್ತದೆ. ಹಾಗೆಯೇ, ಎರಡು ಲಘು ಪರಮಾಣುಗಳನ್ನು ಒಟ್ಟಿಗೆ ಸೇರಿಸಿದಾಗ ದೊಡ್ಡದೊಂದು ಪರಮಾಣು ರೂಪುಗೊಂಡು ಈ ಕ್ರಿಯೆಯಲ್ಲೂ ಅತೀವ ಪ್ರಮಾಣದ ಶಕ್ತಿಯು ಬಿಡುಗಡೆಯಾಗುತ್ತದೆ. ಇದನ್ನು ಬೈಜಿಕ ಸಂಲಯನ (ನ್ಯೂಕ್ಲಿಯರ್ ಫ್ಯೂಸನ್) ಎಂದು ಕರೆಯಲಾಗುತ್ತದೆ. ಹೀಗೆ ಬೈಜಿಕ ವಿದಲನ ಅಥವಾ ಬೈಜಿಕ ಸಂಲಯನ ಕ್ರಿಯೆಗಳಿಂದ ಬಿಡುಗಡೆಯಾಗುವ ಅಪಾರ ಪ್ರಮಾಣದ ಉಷ್ಣಶಕ್ತಿಯನ್ನೇ ಬಳಸಿ ವಿದ್ಯುತ್ ತಯಾರಿಸಲಾಗುತ್ತದೆ. ಯುರೋನಿಯಂನ್ನು ಗಣಿಗಳಿಂದ ಹೊರತೆಗೆದು ಸಂಸ್ಕರಿಸಿ ಸಣ್ಣ ಸಣ್ಣ ಪೆಲೆಟ್ಗಳ ರೂಪಕ್ಕೆ ತರಲಾಗುತ್ತದೆ. ಯುರೋನಿಯಂನಲ್ಲಿ ವಿಕಿರಣವನ್ನು ಹೊರಸೂಸುವ ಗುಣವಿದ್ದು ಈ ವಿಕಿರಣವು ವಾತಾವರಣಕ್ಕೆ ಹೊರಸೂಸದಂತೆ ಎಚ್ಚರವಹಿಸಲಾಗುತ್ತದೆ. ಇಲ್ಲದಿದ್ದಲ್ಲಿ ನ್ಯೂಕ್ಲಿಯರ್ ವಿಷವು ಸುತ್ತಲಿನ ವಾತಾವರಣದ ಮೇಲೆ ನಿಯಂತ್ರಿಸಲಾಗದ ಅಪಾಯಕಾರಿ ದುಷ್ಪರಿಣಾಮಗಳನ್ನು ಬೀರುತ್ತದೆ. ಅಣು ವಿದ್ಯುತ್ ಸ್ಥಾವರಗಳಲ್ಲಿ ಯುರೋನಿಯಂನ್ನು ವಿಭಜನೆಗೊಳಿಸಿದಾಗ ಅದರಿಂದ ಉಂಟಾಗುವ ಶಾಖದಿಂದ ನೀರನ್ನು ಕುದಿಸಿ ಹಬೆಯಾಗಿಸಲಾಗುತ್ತದೆ. ಈ ರೀತಿ ಉಂಟಾದ ಹಬೆಯಿಂದ ಟಬರ್ೈನ್-ಜನರೇಟರ್ಗಳನ್ನು ತಿರುಗಿಸಿ ವಿದ್ಯುತ್ನ್ನು ಉತ್ಪಾದಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನ್ಯೂಕ್ಲಿಯರ್ ತ್ಯಾಜ್ಯ ವಸ್ತುವು ಬಿಡುಗಡೆಯಾಗುತ್ತದೆ. ಈ ತ್ಯಾಜ್ಯ ವಸ್ತುವನ್ನು ಪರಿಸರಕ್ಕೆ ಹಾನಿಯಾಗದಂತೆ ವಿಲೇವಾರಿ ಮಾಡುವುದೇ ಅತಿ ದೊಡ್ಡ ಸಮಸ್ಯೆಯಾಗಿದೆ. ಜೊತೆಗೆ ಅಣು ಸ್ಥಾವರ ವಿದ್ಯುತ್ ಘಟಕಗಳ ಸುರಕ್ಷತೆಯು ಮತ್ತೊಂದು ಸವಾಲಿನ ವಿಷಯವೆನಿಸಿದೆ. ಅಣು ವಿದ್ಯುತ್ ಸ್ಥಾವರದಿಂದ ಬಿಡುಗಡೆಯಾಗುವ ನ್ಯೂಕ್ಲಿಯರ್ ತ್ಯಾಜ್ಯ ವಸ್ತುವನ್ನು ಪುನರ್-ಸಂಸ್ಕರಿಸಿ ಶೇ. 95ರಷ್ಟು ಯುರೋನಿಯಂನ್ನು ಮತ್ತೆ ಪಡೆಯಬಹುದಾದರೂ ಅದಕ್ಕೆ ತಗಲುವ ವೆಚ್ಚ ಅಧಿಕ ಮತ್ತು ತಂತ್ರಜ್ಞಾನ ಆಧುನಿಕವಾದದ್ದು. ಇದರಿಂದ ತ್ಯಾಜ್ಯವಸ್ತುವಿನಲ್ಲಿ ಅಪಾಯಕಾರಿ ವಿಕಿರಣ ವಸ್ತುವಿನ ಪಾಲನ್ನು ಕಡಿಮೆ ಮಾಡಬಹುದು.
ಏನಿದು ಭಾರತ-ಅಮೇರಿಕಾ 123 ಒಪ್ಪಂದ?: 123 ಒಪ್ಪಂದವೆಂದೇ ಜನಪ್ರಿಯವಾಗಿರುವ ಅಮೇರಿಕಾ ಅಣುಶಕ್ತಿ ಕಾಯಿದೆ 1954ರ ಸೆಕ್ಷನ್ 123 ರ ಭಾರತ-ಅಮೇರಿಕಾ ಅಣ್ವಸ್ತ್ರ ಒಪ್ಪಂದ ಇನ್ನೂ ನೆನೆಗುದಿಯಲ್ಲೇ ಇದೆ. ಈ ಒಪ್ಪಂದದ ಮೂಲಕ ಭಾರತವನ್ನು ಅಣ್ವಸ್ತ್ರ ನಿಷೇಧ ಒಪ್ಪಂದದ ಬಲೆಯೊಳಗೆ ತರುವುದು, ಚೀನಾ ಮತ್ತು ಉತ್ತರ ಕೊರಿಯಾಗಳಿಗೆ ಪಯರ್ಾಯ ಶಕ್ತಿಯಾಗಿ ಭಾರತವನ್ನು ಛೂ ಬಿಡುವುದು, ಮಧ್ಯ ಏಷ್ಯಾದಲ್ಲಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಭಾರತದ ಸಹಾಯ ಪಡೆಯುವುದು ಮತ್ತು ಭಾರತದ 14 ನಾಗರೀಕ ಅಣುಸ್ಥಾವರ ಘಟಕಗಳನ್ನು ತಪಾಸಣೆ ಮಾಡಲು ಅವಕಾಶ ಪಡೆಯುವುದು - ಇವು ಅಮೇರಿಕಾದ ಮನದಾಳದ ಆಸೆಗಳು. ಆದರೆ, ಭಾರತವು ನಾಗರೀಕ ಮತ್ತು ಮಿಲಿಟರಿ ಅಣುಸ್ಥಾವರಗಳ ನಡುವೆ ಸ್ಪಷ್ಟವಾಗಿ ಇನ್ನೂ ಗೆರೆ ಎಳೆದುಕೊಂಡಿಲ್ಲದ ಕಾರಣ, ಈ ಒಪ್ಪಂದಕ್ಕೆ ತಿದ್ದುಪಡಿ ತರದೆ ಭಾರತವೇನಾದರೂ ಸಹಿ ಹಾಕಿದಲ್ಲಿ ಭಾರತದ ಮಿಲಿಟರಿ ಕ್ಷೇತ್ರಕ್ಕೆ ಅಮೇರಿಕಾವನ್ನು ಕರೆತಂದಾಗುತ್ತದೆ. ಇನ್ನೊಂದೆಡೆ, ಭಾರತದಲ್ಲಿ ಯುರೋನಿಯಂ ಕಡಿಮೆ ಪ್ರಮಾಣದಲ್ಲಿರುವುದರಿಂದ ಭಾರತವು ತನ್ನ ಅಣು ವಿದ್ಯುತ್ ಸ್ಥಾವರ ಘಟಕಗಳಿಗೆ ಅಮೇರಿಕಾದಿಂದ ಯುರೋನಿಯಂ ಪಡೆದು ತನ್ನ ಆಂತರಿಕ ಯುರೋನಿಯಂ ನ್ನು ಮತ್ತಷ್ಟು ನ್ಯೂಕ್ಲಿಯರ್ ಬಾಂಬುಗಳನ್ನು ತಯಾರಿಕೆಗಾಗಿ ಬಳಸಿಕೊಳ್ಳಲು ಹವಣಿಸುತ್ತಿದೆಯೆಂಬುದು ಪಾಕಿಸ್ತಾನದ ವಿಶ್ಲೇಷಣೆ. ನ್ಯೂಕ್ಲಿಯರ್ ತ್ಯಾಜ್ಯ ವಸ್ತುವನ್ನು ತಾನು ಪುನರ್-ಸಂಸ್ಕರಿಸಲು ಅನುಮತಿ ನೀಡಬೇಕೆಂಬುದು ಭಾರತದ ಬೇಡಿಕೆಯಾಗಿದೆ. ಇಲ್ಲದಿದ್ದಲ್ಲಿ ಪುನರ್-ಸಂಸ್ಕರಣೆಯನ್ನೇ ದೊಡ್ಡ ವ್ಯಾಪಾರವನ್ನಾಗಿ ಮಾಡಿಕೊಂಡಿರುವ ಜಿ-5 ರಾಷ್ಟ್ರಗಳ ಹಿಂದೆ ಭಾರತ ತನ್ನ ನ್ಯೂಕ್ಲಿಯರ್ ತ್ಯಾಜ್ಯ ವಸ್ತು ಪುನರ್-ಸಂಸ್ಕರಣೆಗಾಗಿ ಹಣ ವ್ಯಯಿಸುತ್ತಾ ಪಾಡು ಪಡಬೇಕಾಗುತ್ತದೆ

ನ್ಯೂಕ್ಲಿಯರ್ (ಅಣು) ಶಕ್ತಿಯಿಂದ ವಿದ್ಯುತ್ ತಯಾರಿಸುವುದು ಹೇಗೆ?

ನ್ಯೂಕ್ಲಿಯರ್ (ಅಣು) ಶಕ್ತಿಯಿಂದ ವಿದ್ಯುತ್ ತಯಾರಿಸುವುದು ಹೇಗೆ? ಉಷ್ಣ (ಥರ್ಮಲ್) ವಿದ್ಯುತ್ ಘಟಕಗಳಲ್ಲಿ ಸಾಮಾನ್ಯವಾಗಿ ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನ, ಇತ್ಯಾದಿಗಳನ್ನು ಉರುವಲಾಗಿ ಬಳಸಿ ಅದರಿಂದ ವಿದ್ಯುತ್ನ್ನು ಉತ್ಪಾದಿಸಲಾಗುತ್ತದೆ. ಉದಾಹರಣೆಗೆ: ರಾಯಚೂರು ಉಷ್ಣ ವಿದ್ಯುತ್ ಘಟಕ, ಇತ್ಯಾದಿ. ಆದರೆ ಅಣು ವಿದ್ಯುತ್ ಸ್ಥಾವರ ಘಟಕಗಳಲ್ಲಿ ಯುರೋನಿಯಂನ್ನು ಇಂಧನವಾಗಿ ಬಳಸಲಾಗುತ್ತದೆ. ಉದಾ: ಕೈಗಾ ಅಣು ಶಕ್ತಿ ವಿದ್ಯುತ್ ಘಟಕ, ಇತ್ಯಾದಿ. ವಿಶ್ವದಾದ್ಯಂತ, ಭೂಗರ್ಭದ ಶಿಲೆಗಳಲ್ಲಿ ಯುರೋನಿಯಂ ದೊರೆಯುತ್ತದೆ. ಫ್ರಾನ್ಸ್ನಲ್ಲಿ ದೇಶದ ಶೇ. 75ರಷ್ಟು ಅಣು ವಿದ್ಯುತ್ ಉತ್ಪಾದಿಸಿದರೆ, ಅಮೇರಿಕಾದಲ್ಲಿ ಶೇ. 15ರಷ್ಟು, ಮತ್ತು ಭಾರತದಲ್ಲಿ ಕೇವಲ ಶೇ. 3ರಷ್ಟು ಅಣುವಿದ್ಯುತ್ನ್ನು ಉತ್ಪಾದಿಸಲಾಗುತ್ತಿದೆ. ಅಣು ವಿದ್ಯುತ್:ವಸ್ತುವು ಮೂಲತ: ಮೂಲವಸ್ತುಗಳಿಂದ ರಚನೆಯಾಗಿರುತ್ತದೆ. ಮೂಲವಸ್ತುವಿನಲ್ಲಿ ಅತಿ ಸಣ್ಣ ಕಣಗಳಾದ ಪರಮಾಣುಗಳು ಒಂದಕ್ಕೊಂದು ಅಂಟಿಕೊಂಡಂತೆ ಒಂದು ನಿದರ್ಿಷ್ಟ ಆಕಾರದಲ್ಲಿ ಬಂಧಿಸಲ್ಪಟ್ಟಿರುತ್ತವೆ. ಅವುಗಳನ್ನು ಹಿಡಿದಿಟ್ಟಿರುವ ಬಂಧಕ್ಕೆ ಅಗಾಧ ಶಕ್ತಿಯಿದೆ. ಪ್ರತಿಯೊಂದು ಪರಮಾಣುವಿನ ಕೇಂದ್ರದಲ್ಲಿ ನ್ಯೂಕ್ಲಿಯಸ್ ಇದ್ದು ಅದರ ಸುತ್ತಲೂ ಎಲೆಕ್ಟ್ರಾನ್ಗಳು ಸುತ್ತುತ್ತಿರುತ್ತವೆ. ಒಂದು ಭಾರ ಪರಮಾಣುವಿನ ನ್ಯೂಕ್ಲಿಯಸ್ (ಉದಾಹರಣೆಗೆ: ಯುರೇನಿಯಂ)ನ್ನು ಎರಡು ಲಘು ಪರಮಾಣುಗಳಾಗಿ ವಿಭಜಿಸಿದಾಗ ಈ ಬೈಜಿಕ ಕ್ರಿಯೆಯಲ್ಲಿ ಅತೀವ ಪ್ರಮಾಣದ ಶಕ್ತಿಯು ಬಿಡುಗಡೆಯಾಗುತ್ತದೆ. ಇದನ್ನು ಬೈಜಿಕ ವಿದಲನ (ನ್ಯೂಕ್ಲಿಯರ್ ಫಿಜ:ನ್) ಕ್ರಿಯೆ ಎಂದು ಕರೆಯಲಾಗುತ್ತದೆ. ಹಾಗೆಯೇ, ಎರಡು ಲಘು ಪರಮಾಣುಗಳನ್ನು ಒಟ್ಟಿಗೆ ಸೇರಿಸಿದಾಗ ದೊಡ್ಡದೊಂದು ಪರಮಾಣು ರೂಪುಗೊಂಡು ಈ ಕ್ರಿಯೆಯಲ್ಲೂ ಅತೀವ ಪ್ರಮಾಣದ ಶಕ್ತಿಯು ಬಿಡುಗಡೆಯಾಗುತ್ತದೆ. ಇದನ್ನು ಬೈಜಿಕ ಸಂಲಯನ (ನ್ಯೂಕ್ಲಿಯರ್ ಫ್ಯೂಸನ್) ಎಂದು ಕರೆಯಲಾಗುತ್ತದೆ. ಹೀಗೆ ಬೈಜಿಕ ವಿದಲನ ಅಥವಾ ಬೈಜಿಕ ಸಂಲಯನ ಕ್ರಿಯೆಗಳಿಂದ ಬಿಡುಗಡೆಯಾಗುವ ಅಪಾರ ಪ್ರಮಾಣದ ಉಷ್ಣಶಕ್ತಿಯನ್ನೇ ಬಳಸಿ ವಿದ್ಯುತ್ ತಯಾರಿಸಲಾಗುತ್ತದೆ. ಯುರೋನಿಯಂನ್ನು ಗಣಿಗಳಿಂದ ಹೊರತೆಗೆದು ಸಂಸ್ಕರಿಸಿ ಸಣ್ಣ ಸಣ್ಣ ಪೆಲೆಟ್ಗಳ ರೂಪಕ್ಕೆ ತರಲಾಗುತ್ತದೆ. ಯುರೋನಿಯಂನಲ್ಲಿ ವಿಕಿರಣವನ್ನು ಹೊರಸೂಸುವ ಗುಣವಿದ್ದು ಈ ವಿಕಿರಣವು ವಾತಾವರಣಕ್ಕೆ ಹೊರಸೂಸದಂತೆ ಎಚ್ಚರವಹಿಸಲಾಗುತ್ತದೆ. ಇಲ್ಲದಿದ್ದಲ್ಲಿ ನ್ಯೂಕ್ಲಿಯರ್ ವಿಷವು ಸುತ್ತಲಿನ ವಾತಾವರಣದ ಮೇಲೆ ನಿಯಂತ್ರಿಸಲಾಗದ ಅಪಾಯಕಾರಿ ದುಷ್ಪರಿಣಾಮಗಳನ್ನು ಬೀರುತ್ತದೆ. ಅಣು ವಿದ್ಯುತ್ ಸ್ಥಾವರಗಳಲ್ಲಿ ಯುರೋನಿಯಂನ್ನು ವಿಭಜನೆಗೊಳಿಸಿದಾಗ ಅದರಿಂದ ಉಂಟಾಗುವ ಶಾಖದಿಂದ ನೀರನ್ನು ಕುದಿಸಿ ಹಬೆಯಾಗಿಸಲಾಗುತ್ತದೆ. ಈ ರೀತಿ ಉಂಟಾದ ಹಬೆಯಿಂದ ಟಬರ್ೈನ್-ಜನರೇಟರ್ಗಳನ್ನು ತಿರುಗಿಸಿ ವಿದ್ಯುತ್ನ್ನು ಉತ್ಪಾದಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನ್ಯೂಕ್ಲಿಯರ್ ತ್ಯಾಜ್ಯ ವಸ್ತುವು ಬಿಡುಗಡೆಯಾಗುತ್ತದೆ. ಈ ತ್ಯಾಜ್ಯ ವಸ್ತುವನ್ನು ಪರಿಸರಕ್ಕೆ ಹಾನಿಯಾಗದಂತೆ ವಿಲೇವಾರಿ ಮಾಡುವುದೇ ಅತಿ ದೊಡ್ಡ ಸಮಸ್ಯೆಯಾಗಿದೆ. ಜೊತೆಗೆ ಅಣು ಸ್ಥಾವರ ವಿದ್ಯುತ್ ಘಟಕಗಳ ಸುರಕ್ಷತೆಯು ಮತ್ತೊಂದು ಸವಾಲಿನ ವಿಷಯವೆನಿಸಿದೆ. ಅಣು ವಿದ್ಯುತ್ ಸ್ಥಾವರದಿಂದ ಬಿಡುಗಡೆಯಾಗುವ ನ್ಯೂಕ್ಲಿಯರ್ ತ್ಯಾಜ್ಯ ವಸ್ತುವನ್ನು ಪುನರ್-ಸಂಸ್ಕರಿಸಿ ಶೇ. 95ರಷ್ಟು ಯುರೋನಿಯಂನ್ನು ಮತ್ತೆ ಪಡೆಯಬಹುದಾದರೂ ಅದಕ್ಕೆ ತಗಲುವ ವೆಚ್ಚ ಅಧಿಕ ಮತ್ತು ತಂತ್ರಜ್ಞಾನ ಆಧುನಿಕವಾದದ್ದು. ಇದರಿಂದ ತ್ಯಾಜ್ಯವಸ್ತುವಿನಲ್ಲಿ ಅಪಾಯಕಾರಿ ವಿಕಿರಣ ವಸ್ತುವಿನ ಪಾಲನ್ನು ಕಡಿಮೆ ಮಾಡಬಹುದು.
ಏನಿದು ಭಾರತ-ಅಮೇರಿಕಾ 123 ಒಪ್ಪಂದ?: 123 ಒಪ್ಪಂದವೆಂದೇ ಜನಪ್ರಿಯವಾಗಿರುವ ಅಮೇರಿಕಾ ಅಣುಶಕ್ತಿ ಕಾಯಿದೆ 1954ರ ಸೆಕ್ಷನ್ 123 ರ ಭಾರತ-ಅಮೇರಿಕಾ ಅಣ್ವಸ್ತ್ರ ಒಪ್ಪಂದ ಇನ್ನೂ ನೆನೆಗುದಿಯಲ್ಲೇ ಇದೆ. ಈ ಒಪ್ಪಂದದ ಮೂಲಕ ಭಾರತವನ್ನು ಅಣ್ವಸ್ತ್ರ ನಿಷೇಧ ಒಪ್ಪಂದದ ಬಲೆಯೊಳಗೆ ತರುವುದು, ಚೀನಾ ಮತ್ತು ಉತ್ತರ ಕೊರಿಯಾಗಳಿಗೆ ಪಯರ್ಾಯ ಶಕ್ತಿಯಾಗಿ ಭಾರತವನ್ನು ಛೂ ಬಿಡುವುದು, ಮಧ್ಯ ಏಷ್ಯಾದಲ್ಲಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಭಾರತದ ಸಹಾಯ ಪಡೆಯುವುದು ಮತ್ತು ಭಾರತದ 14 ನಾಗರೀಕ ಅಣುಸ್ಥಾವರ ಘಟಕಗಳನ್ನು ತಪಾಸಣೆ ಮಾಡಲು ಅವಕಾಶ ಪಡೆಯುವುದು - ಇವು ಅಮೇರಿಕಾದ ಮನದಾಳದ ಆಸೆಗಳು. ಆದರೆ, ಭಾರತವು ನಾಗರೀಕ ಮತ್ತು ಮಿಲಿಟರಿ ಅಣುಸ್ಥಾವರಗಳ ನಡುವೆ ಸ್ಪಷ್ಟವಾಗಿ ಇನ್ನೂ ಗೆರೆ ಎಳೆದುಕೊಂಡಿಲ್ಲದ ಕಾರಣ, ಈ ಒಪ್ಪಂದಕ್ಕೆ ತಿದ್ದುಪಡಿ ತರದೆ ಭಾರತವೇನಾದರೂ ಸಹಿ ಹಾಕಿದಲ್ಲಿ ಭಾರತದ ಮಿಲಿಟರಿ ಕ್ಷೇತ್ರಕ್ಕೆ ಅಮೇರಿಕಾವನ್ನು ಕರೆತಂದಾಗುತ್ತದೆ. ಇನ್ನೊಂದೆಡೆ, ಭಾರತದಲ್ಲಿ ಯುರೋನಿಯಂ ಕಡಿಮೆ ಪ್ರಮಾಣದಲ್ಲಿರುವುದರಿಂದ ಭಾರತವು ತನ್ನ ಅಣು ವಿದ್ಯುತ್ ಸ್ಥಾವರ ಘಟಕಗಳಿಗೆ ಅಮೇರಿಕಾದಿಂದ ಯುರೋನಿಯಂ ಪಡೆದು ತನ್ನ ಆಂತರಿಕ ಯುರೋನಿಯಂ ನ್ನು ಮತ್ತಷ್ಟು ನ್ಯೂಕ್ಲಿಯರ್ ಬಾಂಬುಗಳನ್ನು ತಯಾರಿಕೆಗಾಗಿ ಬಳಸಿಕೊಳ್ಳಲು ಹವಣಿಸುತ್ತಿದೆಯೆಂಬುದು ಪಾಕಿಸ್ತಾನದ ವಿಶ್ಲೇಷಣೆ. ನ್ಯೂಕ್ಲಿಯರ್ ತ್ಯಾಜ್ಯ ವಸ್ತುವನ್ನು ತಾನು ಪುನರ್-ಸಂಸ್ಕರಿಸಲು ಅನುಮತಿ ನೀಡಬೇಕೆಂಬುದು ಭಾರತದ ಬೇಡಿಕೆಯಾಗಿದೆ. ಇಲ್ಲದಿದ್ದಲ್ಲಿ ಪುನರ್-ಸಂಸ್ಕರಣೆಯನ್ನೇ ದೊಡ್ಡ ವ್ಯಾಪಾರವನ್ನಾಗಿ ಮಾಡಿಕೊಂಡಿರುವ ಜಿ-5 ರಾಷ್ಟ್ರಗಳ ಹಿಂದೆ ಭಾರತ ತನ್ನ ನ್ಯೂಕ್ಲಿಯರ್ ತ್ಯಾಜ್ಯ ವಸ್ತು ಪುನರ್-ಸಂಸ್ಕರಣೆಗಾಗಿ ಹಣ ವ್ಯಯಿಸುತ್ತಾ ಪಾಡು ಪಡಬೇಕಾಗುತ್ತದೆ